<p><strong>ಬೆಳಗಾವಿ:</strong> ದೇಶದ ಕೃಷಿಭೂಮಿ ಫಲವತ್ತತೆ ಕಾಯ್ದುಕೊಳ್ಳಲು ಮತ್ತು ರಸಗೊಬ್ಬರ ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ‘ಧರತಿ ಮಾತಾ ಬಚಾವೊ’ ಆಂದೋಲನ ಆರಂಭಿಸಿದೆ. ರಾಜ್ಯದ ರೈತರು ಸ್ಪಂದಿಸಿದ್ದು, 6,158 ಸಮಿತಿಗಳು ಈ ಕೆಲಸ ಮಾಡುತ್ತಿವೆ.</p>.<p>ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಕೃಷಿ ಇಲಾಖೆ ‘ಭೂಮಿತಾಯಿ ರಕ್ಷಣೆ ಕಣ್ಗಾವಲು ಸಮತಿ’ ರಚಿಸಿದೆ. ರಾಜ್ಯದಲ್ಲಿ ಗ್ರಾಮ ಮಟ್ಟದಲ್ಲಿ 5,891 ಸಮಿತಿಗಳು 236 ತಾಲ್ಲೂಕು ಮತ್ತು 31 ಜಿಲ್ಲಾ ಮಟ್ಟದಲ್ಲಿ ಏಪ್ರಿಲ್ನಿಂದ ಕ್ರಿಯಾಶೀಲವಾಗಿವೆ.</p>.<p>ನಗರ, ಪಟ್ಟಣ ಮತ್ತು ಗ್ರಾಮದಲ್ಲೂ ಸಮಿತಿಗಳು ಮಣ್ಣಿನ ಆರೋಗ್ಯ ಕಾಪಾಡಲು ಮುಂದಾಗಿವೆ. ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. 502 ಗ್ರಾಮ ಪಂಚಾಯಿತಿಗಳ ಪೈಕಿ ಮೇ 31ರವರೆಗೆ 396 ಪಂಚಾಯಿತಿಗಳಲ್ಲಿ ಆಂದೋಲನ ಪೂರ್ಣವಾಗಿದೆ. ಎರಡನೇ ಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆಯಿದ್ದು, 189ರ ಪೈಕಿ 109ರಲ್ಲಿ ಚಟುವಟಿಕೆಗಳು ನಡೆದಿವೆ.</p>.<p><strong>ಏನಿದರ ಕೆಲಸ: </strong>ವಿಪರೀತ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಮಣ್ಣು ಅನಾರೋಗ್ಯಕ್ಕೆ ಒಳಗಾಗಿದೆ. ಮಾನವ ಹಾಗೂ ಪ್ರಾಣಿ– ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಹೆಚ್ಚಾಗಿವೆ. ರಸಗೊಬ್ಬರದ ವೈಜ್ಞಾನಿಕ ಬಳಕೆ, ಸಾವಯವ ಗೊಬ್ಬರಕ್ಕೆ ಉತ್ತೇಜನ, ಪರ್ಯಾಯ ಗೊಬ್ಬರ ಆಯ್ಕೆ ಮುಂತಾದ ವಿಷಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವುದು, ದುಷ್ಪರಿಣಾಮಗಳ ಎಚ್ಚರಿಕೆ ನೀಡುವುದು ಈ ಆಂದೋಲನದ ಉದ್ದೇಶ.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಗ್ರಾಮ ಮಟ್ಟದ ಸಮಿತಿಯ ಅಧ್ಯಕ್ಷ. ಪಂಚಾಯಿತಿ ಕಾರ್ಯದರ್ಶಿ, ಕೃಷಿ ಸಖಿ ತಂಡ, ಡ್ರೋನ್ ಬಳಕೆ ತಂಡ, ಪ್ರಗತಿಪರ ರೈತರು, ಕೃಷಿ ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಗಳೂ ಇದರ ಸದಸ್ಯರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಂಟಿ ಕೃಷಿ ನಿರ್ದೇಶಕ, ತಾಲ್ಲೂಕು ಮಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಗಳಿವೆ.</p>.<p> <strong>ಯೂರಿಯಾ ಆ್ಯಪ್:</strong> ಕಾಳಸಂತೆಗೆ ಮೂಗುದಾರ ‘ರಾಜ್ಯದಲ್ಲಿ ಈ ಮುಂಗಾರಿಗೆ 30.05 ಲಕ್ಷ ಟನ್ ರಸಗೊಬ್ಬರ ಬೇಡಿಕೆ ಇದೆ. ಈವರೆಗೆ 11.41 ಲಕ್ಷ ಟನ್ ಮಾತ್ರ ಸಂಗ್ರಹವಾಗಿದೆ. 18.64 ಲಕ್ಷ ಟನ್ ಕೊರತೆ ಕಾಡುತ್ತಿದೆ. ಇಷ್ಟರಲ್ಲೇ ಮುಂಗಾರು ಬೇಡಿಕೆ ಸರಿದೂಗಿಸಲು ಕೃಷಿ ಹಾಗೂ ರಸಗೊಬ್ಬರ ಅಧಿಕಾರಿಗಳಿಗೆ ‘ಟಾಸ್ಕ್’ ಕೊಡಲಾಗಿದೆ. </p><p>ಹೀಗಾಗಿ ‘ಭೂಮಿತಾಯಿ ರಕ್ಷಣೆ ಕಣ್ಗಾವಲು ಸಮಿತಿ’ ಆಂದೋಲನ ಮಾದರಿಯಲ್ಲಿ ಕೆಲಸ ಮಾಡುತ್ತಿದೆ‘ ಎಂದು ರಸಗೊಬ್ಬರ ಸರಬರಾಜು ಅಧಿಕಾರಿಗಳು ತಿಳಿಸಿದ್ದಾರೆ. ‘ಕಾಳಸಂತೆ ಹಾವಳಿ ತಡೆಯಲು ಸರ್ಕಾರ ‘ಯೂರಿಯಾ’ ಆ್ಯಪ್ ಸಿದ್ಧಗೊಳಿಸಿದೆ. ಫ್ರೂಟ್ಸ್ನಲ್ಲಿ (FRUITS) ದಾಖಲಿಸಿದ ಪ್ರತಿ ಮಾಹಿತಿಯೂ ಈ ಆ್ಯಪ್ನಲ್ಲಿ ಸಿಗಲಿದೆ. </p><p><strong>ರೈತರ ಆಧಾರ್ ಸಂಖ್ಯೆ ಹಾಕಿದರೆ ಸಾಕು</strong>; ಅವರ ಹೊಲ ಬೆಳೆ ಮಣ್ಣಿನ ಗುಣ ಹಾಗೂ ಎಷ್ಟು ಗೊಬ್ಬರ ಅಗತ್ಯ ಎಂಬುದರ ಮಾಹಿತಿ ಸಿಗಲಿದೆ. ಅದನ್ನು ಆಧರಿಸಿ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು. </p>.<div><blockquote>ರಸಗೊಬ್ಬರ ಬಳಕೆ ತಗ್ಗಿಸಿ ಮಣ್ಣು ಆರೋಗ್ಯ ಕಾಪಾಡಲು ಕೈಗೊಂಡ ಆಂದೋಲನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಹಲವು ರೈತರು ಸಾವಯವಕ್ಕೆ ಮರಳಿದ್ದಾರೆ </blockquote><span class="attribution">ಎಚ್.ಡಿ.ಕೋಳೇಕರ ಜಂಟಿ ನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ದೇಶದ ಕೃಷಿಭೂಮಿ ಫಲವತ್ತತೆ ಕಾಯ್ದುಕೊಳ್ಳಲು ಮತ್ತು ರಸಗೊಬ್ಬರ ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ‘ಧರತಿ ಮಾತಾ ಬಚಾವೊ’ ಆಂದೋಲನ ಆರಂಭಿಸಿದೆ. ರಾಜ್ಯದ ರೈತರು ಸ್ಪಂದಿಸಿದ್ದು, 6,158 ಸಮಿತಿಗಳು ಈ ಕೆಲಸ ಮಾಡುತ್ತಿವೆ.</p>.<p>ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಕೃಷಿ ಇಲಾಖೆ ‘ಭೂಮಿತಾಯಿ ರಕ್ಷಣೆ ಕಣ್ಗಾವಲು ಸಮತಿ’ ರಚಿಸಿದೆ. ರಾಜ್ಯದಲ್ಲಿ ಗ್ರಾಮ ಮಟ್ಟದಲ್ಲಿ 5,891 ಸಮಿತಿಗಳು 236 ತಾಲ್ಲೂಕು ಮತ್ತು 31 ಜಿಲ್ಲಾ ಮಟ್ಟದಲ್ಲಿ ಏಪ್ರಿಲ್ನಿಂದ ಕ್ರಿಯಾಶೀಲವಾಗಿವೆ.</p>.<p>ನಗರ, ಪಟ್ಟಣ ಮತ್ತು ಗ್ರಾಮದಲ್ಲೂ ಸಮಿತಿಗಳು ಮಣ್ಣಿನ ಆರೋಗ್ಯ ಕಾಪಾಡಲು ಮುಂದಾಗಿವೆ. ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. 502 ಗ್ರಾಮ ಪಂಚಾಯಿತಿಗಳ ಪೈಕಿ ಮೇ 31ರವರೆಗೆ 396 ಪಂಚಾಯಿತಿಗಳಲ್ಲಿ ಆಂದೋಲನ ಪೂರ್ಣವಾಗಿದೆ. ಎರಡನೇ ಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆಯಿದ್ದು, 189ರ ಪೈಕಿ 109ರಲ್ಲಿ ಚಟುವಟಿಕೆಗಳು ನಡೆದಿವೆ.</p>.<p><strong>ಏನಿದರ ಕೆಲಸ: </strong>ವಿಪರೀತ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಮಣ್ಣು ಅನಾರೋಗ್ಯಕ್ಕೆ ಒಳಗಾಗಿದೆ. ಮಾನವ ಹಾಗೂ ಪ್ರಾಣಿ– ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಹೆಚ್ಚಾಗಿವೆ. ರಸಗೊಬ್ಬರದ ವೈಜ್ಞಾನಿಕ ಬಳಕೆ, ಸಾವಯವ ಗೊಬ್ಬರಕ್ಕೆ ಉತ್ತೇಜನ, ಪರ್ಯಾಯ ಗೊಬ್ಬರ ಆಯ್ಕೆ ಮುಂತಾದ ವಿಷಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವುದು, ದುಷ್ಪರಿಣಾಮಗಳ ಎಚ್ಚರಿಕೆ ನೀಡುವುದು ಈ ಆಂದೋಲನದ ಉದ್ದೇಶ.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಗ್ರಾಮ ಮಟ್ಟದ ಸಮಿತಿಯ ಅಧ್ಯಕ್ಷ. ಪಂಚಾಯಿತಿ ಕಾರ್ಯದರ್ಶಿ, ಕೃಷಿ ಸಖಿ ತಂಡ, ಡ್ರೋನ್ ಬಳಕೆ ತಂಡ, ಪ್ರಗತಿಪರ ರೈತರು, ಕೃಷಿ ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಗಳೂ ಇದರ ಸದಸ್ಯರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಂಟಿ ಕೃಷಿ ನಿರ್ದೇಶಕ, ತಾಲ್ಲೂಕು ಮಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಗಳಿವೆ.</p>.<p> <strong>ಯೂರಿಯಾ ಆ್ಯಪ್:</strong> ಕಾಳಸಂತೆಗೆ ಮೂಗುದಾರ ‘ರಾಜ್ಯದಲ್ಲಿ ಈ ಮುಂಗಾರಿಗೆ 30.05 ಲಕ್ಷ ಟನ್ ರಸಗೊಬ್ಬರ ಬೇಡಿಕೆ ಇದೆ. ಈವರೆಗೆ 11.41 ಲಕ್ಷ ಟನ್ ಮಾತ್ರ ಸಂಗ್ರಹವಾಗಿದೆ. 18.64 ಲಕ್ಷ ಟನ್ ಕೊರತೆ ಕಾಡುತ್ತಿದೆ. ಇಷ್ಟರಲ್ಲೇ ಮುಂಗಾರು ಬೇಡಿಕೆ ಸರಿದೂಗಿಸಲು ಕೃಷಿ ಹಾಗೂ ರಸಗೊಬ್ಬರ ಅಧಿಕಾರಿಗಳಿಗೆ ‘ಟಾಸ್ಕ್’ ಕೊಡಲಾಗಿದೆ. </p><p>ಹೀಗಾಗಿ ‘ಭೂಮಿತಾಯಿ ರಕ್ಷಣೆ ಕಣ್ಗಾವಲು ಸಮಿತಿ’ ಆಂದೋಲನ ಮಾದರಿಯಲ್ಲಿ ಕೆಲಸ ಮಾಡುತ್ತಿದೆ‘ ಎಂದು ರಸಗೊಬ್ಬರ ಸರಬರಾಜು ಅಧಿಕಾರಿಗಳು ತಿಳಿಸಿದ್ದಾರೆ. ‘ಕಾಳಸಂತೆ ಹಾವಳಿ ತಡೆಯಲು ಸರ್ಕಾರ ‘ಯೂರಿಯಾ’ ಆ್ಯಪ್ ಸಿದ್ಧಗೊಳಿಸಿದೆ. ಫ್ರೂಟ್ಸ್ನಲ್ಲಿ (FRUITS) ದಾಖಲಿಸಿದ ಪ್ರತಿ ಮಾಹಿತಿಯೂ ಈ ಆ್ಯಪ್ನಲ್ಲಿ ಸಿಗಲಿದೆ. </p><p><strong>ರೈತರ ಆಧಾರ್ ಸಂಖ್ಯೆ ಹಾಕಿದರೆ ಸಾಕು</strong>; ಅವರ ಹೊಲ ಬೆಳೆ ಮಣ್ಣಿನ ಗುಣ ಹಾಗೂ ಎಷ್ಟು ಗೊಬ್ಬರ ಅಗತ್ಯ ಎಂಬುದರ ಮಾಹಿತಿ ಸಿಗಲಿದೆ. ಅದನ್ನು ಆಧರಿಸಿ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು. </p>.<div><blockquote>ರಸಗೊಬ್ಬರ ಬಳಕೆ ತಗ್ಗಿಸಿ ಮಣ್ಣು ಆರೋಗ್ಯ ಕಾಪಾಡಲು ಕೈಗೊಂಡ ಆಂದೋಲನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಹಲವು ರೈತರು ಸಾವಯವಕ್ಕೆ ಮರಳಿದ್ದಾರೆ </blockquote><span class="attribution">ಎಚ್.ಡಿ.ಕೋಳೇಕರ ಜಂಟಿ ನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>