'ಈ ಹಣವು ವಿಜಯಪುರ ಜಿಲ್ಲೆಯ ಸರಹದ್ದಿನಲ್ಲಿ ಸಿಕ್ಕಿದೆ. ಕಾರಿನಲ್ಲಿ ಆರು ಆರೋಪಿಗಳು ಇದ್ದರು. ಅವರ ಬಳಿ ಹಣ ಹಾಕಿದ 174 ಪಾಕೆಟ್ಟುಗಳು ಇದ್ದವು. ಜತೆಗೆ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರ ಪತ್ರಗಳೂ ಇವೆ. ಎಲ್ಲವನ್ನು ವಶಕ್ಕೆ ತೆಗೆದುಕೊಂಡಿದ್ದು, ಚುನಾವಣಾಧಿಕಾರಿ ಗಮನಕ್ಕೆ ತರಲಾಗುವುದು' ಎಂದು ದಾಳಿ ನಡೆಸಿದ ಅಧಿಕಾರಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.