ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2018ರ ಕಾದಂಬರಿ ಪ್ರಶಸ್ತಿಗೆ ಡಾ.ಕೃಷ್ಣಮೂರ್ತಿ ಹನೂರು, 2019ರ ಕಥಾ ಸಾಹಿತ್ಯ ಪ್ರಶಸ್ತಿಗೆ ಡಾ.ಅಮರೇಶ ನುಗಡೋಣಿ ಹಾಗೂ ಯುವ ಸಾಹಿತ್ಯ ಪುರಸ್ಕಾರಕ್ಕೆ ಸ್ವಾಮಿ ಪೊನ್ನಾಚಿ (ಕಥಾ ಸಂಕಲನ– ಧೂಪದ ಮಕ್ಕಳು) ಭಾಜನರಾಗಿದ್ದಾರೆ. ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಪ್ರಶಸ್ತಿ ವಿತರಿಸಲಿದ್ದಾರೆ. ಚಿಂತಕ ರಹಮತ್ ತರೀಕೆರೆ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ’ ಎಂದು ತಿಳಿಸಿದರು.