ಕೈಗಾರಿಕೆ ಪ್ರದೇಶದ ಸುತ್ತ ಹತ್ತಾರು ಕವಳಿ ಕಂಟಿಗಳು ಇನ್ನೂ ಜೀವಂತವಾಗಿವೆ. ಬೇಸಿಗೆ ಕಾಲದಲ್ಲಿ ಕಾಯಿ ಮತ್ತು ಹಣ್ಣಿನ ಸಡಗರ ಇಲ್ಲಿ ಕಂಡುಬರುತ್ತಿದೆ. ಕಾಯಿ ತಂದು ಉಪ್ಪಿನಕಾಯಿ ಹಾಕಿ ರೊಟ್ಟಿ ಜೊತೆಗೆ ಸವಿಯುತ್ತಾರೆ. ಹಣ್ಣುಗಳನ್ನು ತೊಳೆದು ಉಪ್ಪು ಹಾಕಿ ಬಾಯಿ ಚಪ್ಪರಿಸುತ್ತಾರೆ. ಋತುವಿನಲ್ಲೊಂದು ಹಣ್ಣುಗಳನ್ನು ಪ್ರಕೃತಿ ನಮಗೆ ನೀಡುತ್ತದೆ. ಅದನ್ನು ಸವಿಯುವ ಹಾಗೂ ಅವುಗಳ ಮಹತ್ವವನ್ನು ಅರಿಯುವ ಕೆಲಸವನ್ನು ನಾವು ಮಾಡಬೇಕಷ್ಟೆ. ತಂದು ಮಾರುವವರಿಂದ ಖರೀದಿಸಿ ರುಚಿ ನೋಡಬಹುದು.