ಬೆಳಗಾವಿ: ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರು ಕಾಗವಾಡ ಪೊಲೀಸ್ ಠಾಣೆಗೆ ಗಸ್ತು ವಾಹನ ಕೊಡಿಸಿದ್ದಾರೆ.
ವಾಹನ ನೀಡುವಂತೆ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ್ದ ಮನವಿ ಪುರಸ್ಕರಿಸಿ, 2019-20ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ₹ 10 ಲಕ್ಷ ಮೌಲ್ಯದ ಮಹಿಂದ್ರಾ ಬೊಲೆರೊ ವಾಹನ ಖರೀದಿಗೆ ಅನುದಾನ ನೀಡಿದ್ದಾರೆ. ಭಾನುವಾರ ಪೂಜೆ ಸಲ್ಲಿಸಿ ಠಾಣೆಯ ಪಿಎಸ್ಐ ಹಣಮಂತ ಧರ್ಮಟ್ಟಿ ಅವರಿಗೆ ಕೀ ಹಸ್ತಾಂತರಿಸಿದರು.
‘ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ತೊಂದರೆಗಳಾದಾಗ ಬೇಗನೆ ಸ್ಪಂದಿಸಲು ಸಹಕಾರಿಯಾಗಲೆಂದು ವಾಹನ ಕೊಡಿಸಿದ್ದೇನೆ’ ಎಂದು ಅವರು ತಿಳಿಸಿದರು.
ಪೊಲೀಸ್ ಅಧಿಕಾರಿ ಐ.ಎಸ್. ಗುರುನಾಥ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.