<p><strong>ಖಾನಾಪುರ:</strong> ತಾಲ್ಲೂಕಿನ ಬಿಜಗರ್ಣಿ, ಅನಗಡಿ, ಹಲಸಾಲ, ಪಡಲವಾಡಿ, ಕರಂಜಾಳ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಖಾನಾಪುರ ಪಟ್ಟಣ, ನಂದಗಡ-ಹಲಸಿಯಿಂದ ಬಸ್ ವ್ಯವಸ್ಥೆ ಇಲ್ಲದ್ದರಿಂದ ಈ ಭಾಗದ ಜನರಿಗೆ ಮತ್ತು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಬಿಜಗರ್ಣಿ ಹಾಗೂ ಸುತ್ತಲಿನ ಗ್ರಾಮಸ್ಥರು ಮಂಗಳವಾರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಖಾನಾಪುರ ಘಟಕದ ವ್ಯವಸ್ಥಾಪಕ ಸಂತೋಷ ಹುರಳಿಕೊಪ್ಪ ಅವರಿಗೆ ಮನವಿ ಸಲ್ಲಿಸಿದರು.</p>.<p>ಈಗಿನ ವೇಳಾಪಟ್ಟಿ ಪ್ರಕಾರ ಬಿಜಗರ್ಣಿ, ಅನಗಡಿ, ಹಲಸಾಲ, ಪಡಲವಾಡಿ, ಕರಂಜಾಳಗಳಿಗೆ ಬೆಳಿಗ್ಗೆ 11ಗಂಟೆಗೆ ಬಸ್ ಬರುತ್ತದೆ. ಇದರಿಂದ ಖಾನಾಪುರ, ನಂದಗಡ ಮತ್ತು ಹಲಸಿಗೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಬಸ್ ಸಂಚಾರವನ್ನು ಬೆಳಿಗ್ಗೆ 9.30ಕ್ಕೆ ಬದಲಿಸಬೇಕು ಮತ್ತು ಉಳಿದ ಸಮಯದಲ್ಲಿ ಈ ಭಾಗದಲ್ಲಿ ಎಲ್ಲ ಬಸ್ ಗಳು ಸರಿಯಾದ ಸಮಯಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.</p>.<p>ಶ್ರೀಕಾಂತ ಮಾದಾರ, ತಾನಾಜಿ ತಾಂಬೂಳಕರ, ಮಾರುತಿ ಕಾಂಬಳೆ, ಅನೀಲ ಚೌರಿ, ದೀಪಕ ಚೌರಿ, ರಾಮಚಂದ್ರ ದೇಸಾಯಿ, ನಾಮದೇವ ಕಾಂಬಳೆ, ಸುಧೀರ ಗುಂಜಿಕರ, ವಿಕಾಸ ದೇಸಾಯಿ, ಹಿಂದೂರಾವ್ ದೇಸಾಯಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260604-21-1677272450</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾನಾಪುರ:</strong> ತಾಲ್ಲೂಕಿನ ಬಿಜಗರ್ಣಿ, ಅನಗಡಿ, ಹಲಸಾಲ, ಪಡಲವಾಡಿ, ಕರಂಜಾಳ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಖಾನಾಪುರ ಪಟ್ಟಣ, ನಂದಗಡ-ಹಲಸಿಯಿಂದ ಬಸ್ ವ್ಯವಸ್ಥೆ ಇಲ್ಲದ್ದರಿಂದ ಈ ಭಾಗದ ಜನರಿಗೆ ಮತ್ತು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಬಿಜಗರ್ಣಿ ಹಾಗೂ ಸುತ್ತಲಿನ ಗ್ರಾಮಸ್ಥರು ಮಂಗಳವಾರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಖಾನಾಪುರ ಘಟಕದ ವ್ಯವಸ್ಥಾಪಕ ಸಂತೋಷ ಹುರಳಿಕೊಪ್ಪ ಅವರಿಗೆ ಮನವಿ ಸಲ್ಲಿಸಿದರು.</p>.<p>ಈಗಿನ ವೇಳಾಪಟ್ಟಿ ಪ್ರಕಾರ ಬಿಜಗರ್ಣಿ, ಅನಗಡಿ, ಹಲಸಾಲ, ಪಡಲವಾಡಿ, ಕರಂಜಾಳಗಳಿಗೆ ಬೆಳಿಗ್ಗೆ 11ಗಂಟೆಗೆ ಬಸ್ ಬರುತ್ತದೆ. ಇದರಿಂದ ಖಾನಾಪುರ, ನಂದಗಡ ಮತ್ತು ಹಲಸಿಗೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಬಸ್ ಸಂಚಾರವನ್ನು ಬೆಳಿಗ್ಗೆ 9.30ಕ್ಕೆ ಬದಲಿಸಬೇಕು ಮತ್ತು ಉಳಿದ ಸಮಯದಲ್ಲಿ ಈ ಭಾಗದಲ್ಲಿ ಎಲ್ಲ ಬಸ್ ಗಳು ಸರಿಯಾದ ಸಮಯಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.</p>.<p>ಶ್ರೀಕಾಂತ ಮಾದಾರ, ತಾನಾಜಿ ತಾಂಬೂಳಕರ, ಮಾರುತಿ ಕಾಂಬಳೆ, ಅನೀಲ ಚೌರಿ, ದೀಪಕ ಚೌರಿ, ರಾಮಚಂದ್ರ ದೇಸಾಯಿ, ನಾಮದೇವ ಕಾಂಬಳೆ, ಸುಧೀರ ಗುಂಜಿಕರ, ವಿಕಾಸ ದೇಸಾಯಿ, ಹಿಂದೂರಾವ್ ದೇಸಾಯಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260604-21-1677272450</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>