<p><strong>ಖಾನಾಪುರ:</strong> 16 ವರ್ಷಗಳ ನಂತರ ಸಡಗರದಿಂದ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಗೆ ತಾಲ್ಲೂಕಿನ ಬೈಲೂರು, ಮೊರಬ, ದೇವಾಚಿಹಟ್ಟಿ ಹಾಗೂ ಬೆಳಗಾವಿ ತಾಲ್ಲೂಕಿನ ಬಾಕನೂರು ಸಾಕ್ಷಿಯಾಗುತ್ತಿವೆ.</p>.<p>ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿರುವ ಈ ಊರುಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಎತ್ತ ನೋಡಿದರೂ ಭಂಡಾರವೋ ಭಂಡಾರ.</p>.<p>ನಾಲ್ಕು ಗ್ರಾಮಗಳ ಆರಾಧ್ಯದೈವ ಬೈಲೂರಿನ ಗ್ರಾಮದೇವಿ. ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದಾರೆ.</p>.<p>ಬೈಲೂರಿನ ಗ್ರಾಮದೇವಿ ದೇವಸ್ಥಾನದ ಮುಂಭಾಗದಲ್ಲಿ ದೇವಿ ವಿವಾಹ ಮಹೋತ್ಸವ ಮತ್ತು ಜಾತ್ರೆಯ ಸಾಂಪ್ರದಾಯಿಕ ಮತ್ತು ಧಾರ್ಮಿಕ ವಿಧಿ–ವಿಧಾನ ಸಂಪನ್ನಗೊಂಡ ನಂತರ, ಇಡೀದಿನ ನಾಲ್ಕೂ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ದೇವಿ ಹೊನ್ನಾಟ ನಡೆದಿದೆ. ಇದರ ಪ್ರಯುಕ್ತ ನಾಲ್ಕೂ ಊರುಗಳು ಭಂಡಾರದ ಓಕುಳಿಯಲ್ಲಿ ಮಿಂದೆದ್ದಿವೆ.</p>.<p>ಈ ಊರುಗಳ ಬೀದಿಗಳು, ದೇವಾಲಯಗಳು, ಮನೆಗಳು ಮತ್ತು ಸಾರ್ವಜನಿಕ ಕಟ್ಟಡಗಳು ಭಂಡಾರಮಯವಾಗಿವೆ. ಹೊನ್ನಾಟದ ಬಳಿಕ ದೇವಿಯನ್ನು ಬೈಲೂರಿನ ಹೊರವಲಯದಲ್ಲಿ ನಿರ್ಮಿಸಿದ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಮೇ 14ರವರೆಗೆ ದೇವಿ ಇದೇ ಗದ್ದುಗೆಯಲ್ಲಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.</p>.<p>ಜಾತ್ರಾ ಸಮಿತಿ ನಿತ್ಯ ಸಂಜೆ ಆಯೋಜಿಸುತ್ತಿರುವ ಕಾರ್ಯಕ್ರಮಗಳು, ಆಟಗಳು ಜಾತ್ರೆ ನೋಡಲು ಬಂದವರಿಗೆ ಮುದ ನೀಡುತ್ತಿವೆ. ಮೇ 14ರಂದು ಸೂರ್ಯಾಸ್ತದ ಬಳಿಕ ದೇವಿಯನ್ನು ಸೀಮೆಗೆ ಕಳುಹಿಸಿದ ನಂತರ, ಜಾತ್ರೆಗೆ ವಿದ್ಯುಕ್ತವಾಗಿ ತೆರೆ ಬೀಳಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-21-811043541</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾನಾಪುರ:</strong> 16 ವರ್ಷಗಳ ನಂತರ ಸಡಗರದಿಂದ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಗೆ ತಾಲ್ಲೂಕಿನ ಬೈಲೂರು, ಮೊರಬ, ದೇವಾಚಿಹಟ್ಟಿ ಹಾಗೂ ಬೆಳಗಾವಿ ತಾಲ್ಲೂಕಿನ ಬಾಕನೂರು ಸಾಕ್ಷಿಯಾಗುತ್ತಿವೆ.</p>.<p>ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿರುವ ಈ ಊರುಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಎತ್ತ ನೋಡಿದರೂ ಭಂಡಾರವೋ ಭಂಡಾರ.</p>.<p>ನಾಲ್ಕು ಗ್ರಾಮಗಳ ಆರಾಧ್ಯದೈವ ಬೈಲೂರಿನ ಗ್ರಾಮದೇವಿ. ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದಾರೆ.</p>.<p>ಬೈಲೂರಿನ ಗ್ರಾಮದೇವಿ ದೇವಸ್ಥಾನದ ಮುಂಭಾಗದಲ್ಲಿ ದೇವಿ ವಿವಾಹ ಮಹೋತ್ಸವ ಮತ್ತು ಜಾತ್ರೆಯ ಸಾಂಪ್ರದಾಯಿಕ ಮತ್ತು ಧಾರ್ಮಿಕ ವಿಧಿ–ವಿಧಾನ ಸಂಪನ್ನಗೊಂಡ ನಂತರ, ಇಡೀದಿನ ನಾಲ್ಕೂ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ದೇವಿ ಹೊನ್ನಾಟ ನಡೆದಿದೆ. ಇದರ ಪ್ರಯುಕ್ತ ನಾಲ್ಕೂ ಊರುಗಳು ಭಂಡಾರದ ಓಕುಳಿಯಲ್ಲಿ ಮಿಂದೆದ್ದಿವೆ.</p>.<p>ಈ ಊರುಗಳ ಬೀದಿಗಳು, ದೇವಾಲಯಗಳು, ಮನೆಗಳು ಮತ್ತು ಸಾರ್ವಜನಿಕ ಕಟ್ಟಡಗಳು ಭಂಡಾರಮಯವಾಗಿವೆ. ಹೊನ್ನಾಟದ ಬಳಿಕ ದೇವಿಯನ್ನು ಬೈಲೂರಿನ ಹೊರವಲಯದಲ್ಲಿ ನಿರ್ಮಿಸಿದ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಮೇ 14ರವರೆಗೆ ದೇವಿ ಇದೇ ಗದ್ದುಗೆಯಲ್ಲಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.</p>.<p>ಜಾತ್ರಾ ಸಮಿತಿ ನಿತ್ಯ ಸಂಜೆ ಆಯೋಜಿಸುತ್ತಿರುವ ಕಾರ್ಯಕ್ರಮಗಳು, ಆಟಗಳು ಜಾತ್ರೆ ನೋಡಲು ಬಂದವರಿಗೆ ಮುದ ನೀಡುತ್ತಿವೆ. ಮೇ 14ರಂದು ಸೂರ್ಯಾಸ್ತದ ಬಳಿಕ ದೇವಿಯನ್ನು ಸೀಮೆಗೆ ಕಳುಹಿಸಿದ ನಂತರ, ಜಾತ್ರೆಗೆ ವಿದ್ಯುಕ್ತವಾಗಿ ತೆರೆ ಬೀಳಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-21-811043541</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>