ಇಲ್ಲಿನ ಮಹಾದ್ವಾರ ರಸ್ತೆಯ ನಿವಾಸಿ ವಿನಾಯಕ ಶಂಕರ ಪ್ರಧಾನ, ಹೊಸ ಗಾಂಧಿನಗರದ ಶಿವನಾಥ ಅಲಿಯಾಸ್ ಪಿಂಟು ರಾನಬಾ ರೇಡೇಕರ, ಪುಲಬಾಗ್ ಗಲ್ಲಿಯ ಅಮಿತ ಯಲ್ಲಪ ಮಜಗಾಂವಿ, ಗಾಂಧಿನಗರದ ಮುರಾರಿ ಬಾಬಾಜಾನ ಖಾನಾಪುರಿ, ಅನಗೋಳದ ಸಂಜಯ ಪ್ರಕಾಶ ಕೌಜಲಗಿ ಅಲಿಯಾಸ್ ಭಜಂತ್ರಿ, ಮಾರುತಿ ನಗರದ ರಾಜು ಜ್ಞಾನೇಶ್ವರ ಗೋಣಿ, ರೈತ ಗಲ್ಲಿಯ ಅಮಿತ ಪರಶುರಾಮ ಧಾಮಣೇಕರ, ಬೆಳವಟ್ಟಿಯ ಚೇತನ ನಾರಾಯಣ ಪಾಟೀಲ ಹಾಗೂ ಮಹಾರಾಷ್ಟ್ರದ ಗಡಹಿಂಗ್ಲಜ್ ತಾಲ್ಲೂಕು ಹಡಲಗೆ ಗ್ರಾಮದ ಸುರೇಶ ಮಹಾದೇವ ಪಾಟೀಲ ಬಂಧಿತರು. ಅವರಿಂದ, ಅಪಹರಣಕ್ಕೆ ಬಳಸಿದ್ದ ಕಾರು, ಐದು ದ್ವಿಚಕ್ರವಾಹನಗಳು ಹಾಗೂ 11 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ₹ 8 ಲಕ್ಷವಾಗಿದೆ.