<p><strong>ಚನ್ನಮ್ಮನ ಕಿತ್ತೂರು</strong>: ಕಿತ್ತೂರು ಸಂಸ್ಥಾನ ಕಾಲದ ಐತಿಹಾಸಿಕ ಗಡಾದ ಮರಡಿ ಮೇಲಿನ ವೀಕ್ಷಣಾ ಗೋಪುರ ಕುಸಿದು ಬಿದ್ದು ಎರಡು ವರ್ಷ ಸಮೀಪಿಸುತ್ತಿದೆ. ಆದರೂ, ಅದನ್ನು ಪುನರ್ ನಿರ್ಮಿಸುವ ಗೋಜಿಗೆ ಸರ್ಕಾರ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.</p>.<p>ಕಿತ್ತೂರು ಕೋಟೆ, ವಸ್ತು ಸಂಗ್ರಹಾಲಯ, ದೊರೆಗಳ ಸಮಾಧಿ ತಾಣಗಳು, ರಾಜಗುರುಗಳ ಕಲ್ಮಠ ಮತ್ತು ಗಡಾದ ಮರಡಿ ವೀಕ್ಷಿಸಲು ಪ್ರವಾಸಿಗರು ಬರುತ್ತಾರೆ. ಪಾಳು ಬಿದ್ದ ಕೋಟೆ ವೀಕ್ಷಿಸಿ ಗಡಾದ ಮರಡಿಗೆ ಆಗಮಿಸಿದರೆ, ‘ಇದನ್ನೂ ಬ್ರಿಟಿಷರು ಕೆಡವಿದ್ದಾರೆಯೇ’ ಎಂಬ ಪ್ರಶ್ನೆಯನ್ನು ಪ್ರವಾಸಿಗರು ಕೇಳುವಂತಾಗಿದೆ.</p>.<p>ದೊರೆಗಳ ಕಾಲದಲ್ಲಿ ವೈರಿಗಳ ಚಲನ– ವಲನಗಳ ಮೇಲೆ ನಿಗಾ ಇರಿಸುವ ವೀಕ್ಷಣಾ ಗೋಪುರವಾಗಿದ್ದ ಈ ಐತಿಹಾಸಿಕ ಗಡಾದ ಮರಡಿಗೆ ತನ್ನದೇ ಆದ ಇತಿಹಾಸವಿದೆ. ಗೋಪುರದ ಮೇಲೆ ನಿಂತು ನೋಡಿದರೆ ಹತ್ತಾರು ಕಿ.ಮೀ ದೂರದವರೆಗಿನ ಪ್ರದೇಶ ಕಣ್ಣಿಗೆ ಗೋಚರಿಸುತ್ತದೆ. ನೀಲಗಿರಿ ಗಿಡಗಳು ಬೆಳೆಯುವ ಮುನ್ನ ಧಾರವಾಡ ವಿಶ್ವವಿದ್ಯಾಲಯದ ಗೋಪುರ ಕಣ್ಣಿನ ನೋಟಕ್ಕೆ ಸಿಗುತ್ತಿತ್ತು ಎಂದು ಇಲ್ಲಿನ ಹಿರಿಯರು ನೆನಪಿಸುತ್ತಾರೆ.</p>.<p>ಮಹತ್ವದ ಸಂಗತಿಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಈ ಮಹತ್ವದ ತಾಣದ ಅಭಿವೃದ್ಧಿಗಾಗಿ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಮಹಾಂತೇಶ ದೊಡ್ಡಗೌಡರ ಒತ್ತಾಸೆಯಿಂದ ಬಿಜೆಪಿ ಸರ್ಕಾರವು ₹ 1.80 ಕೋಟಿ ಬಿಡುಗಡೆ ಮಾಡಿತ್ತು. ಅದರ ಸೌಂದರ್ಯ ಹೆಚ್ಚಿಸಿ ಆಕರ್ಷಣೀಯ ತಾಣವಾಗಿ ರೂಪಿಸಲು ಯೋಜನೆ ರೂಪಿಸಲಾಗಿತ್ತು. ಮರಡಿಗೆ ತೆರಳುವ ರಸ್ತೆ ಸುಧಾರಣೆ, ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ, ಮರಡಿ ಬಳಿ ತಿನಿಸು ಕಟ್ಟೆ ನಿರ್ಮಾಣ, ಮರಡಿಗೆ ಹೊಸ ರೂಪ ನೀಡುವ ಕಾಮಗಾರಿ ಯೋಜನೆಯಲ್ಲಿದ್ದವು.</p>.<p>ಇದರಲ್ಲಿ ಕೆಲ ಕಾಮಗಾರಿ ನಡೆದಿವೆ. ಮರಡಿ ಮಧ್ಯ ಸುಮಾರು 80 ಅಡಿ ಎತ್ತರದ ಧ್ವಜಸ್ತಂಭ ಅನಾವರಣ ಮಾಡಲಾಗಿತ್ತು. ಜ. 26 ಹಾಗೂ ಆ. 15ಕ್ಕೆ ಇಲ್ಲಿ ವಿಶಾಲವಾದ ರಾಷ್ಟ್ರಧ್ವಜಾರೋಹಣ ಮಾಡಲಾಗುತ್ತಿತ್ತು.</p>.<p>ಎರಡ್ಮೂರು ಬಾರಿ ಧ್ವಜಾರೋಹಣಕ್ಕೂ ಈ ತಾಣ ಸಾಕ್ಷಿಯಾಗಿ, ನೋಡುಗರಲ್ಲಿ ಪುಳಕ ಉಂಟುಮಾಡಿತ್ತು. ಆದರೆ, 2024ರಲ್ಲಿ ಸುರಿದ ಮಳೆಗೆ ನವೀಕರಣಗೊಂಡಿದ್ದ ಗೋಪುರ ಕುಸಿದು ಬಿತ್ತು. ಯೋಚಿಸದೇ ನಡೆಸಿದ ಕಾಮಗಾರಿಗೆಯಿಂದಾಗಿ ಗೋಪುರದ ಮೇಲೆ ನೀರು ಸಂಗ್ರಹಗೊಂಡು ಕೆಳಗೆ ಬಸಿದಿದ್ದು ಇದಕ್ಕೆ ಕಾರಣವಾಯಿತು. ಅನಂತರ ಪ್ರವಾಸಿಗರು ಮತ್ತು ಜನರ ಓಡಾಟವನ್ನು ಈ ಪ್ರದೇಶದಲ್ಲಿ ನಿಷೇಧಿಸಲಾಯಿತು ಎಂದು ಇಲ್ಲಿನವರು ಹೇಳುತ್ತಾರೆ.</p>.<p>ಗೋಪುರದ ಒಂದು ಭಾಗ ಬಿದ್ದಿದ್ದರೂ ಆಡಳಿತ ವ್ಯವಸ್ಥೆಯಿಂದಾಗಿ ಇದೂ ಒಂದು ಸ್ಮಾರಕವಾಗಿ ಮೂಕರೋದನ ಅನುಭವಿಸುತ್ತ ನಿಂತಂತೆ ಭಾಸವಾಗುತ್ತದೆ ಎನ್ನುತ್ತಾರೆ ಜನರು.</p>.<p>ಗಡಾದ ಮರಡಿ ಅಭಿವೃದ್ಧಿಗಾಗಿ ಹಿಂದಿನ ಸರ್ಕಾರ ₹ 1.80 ಕೋಟಿ ಕಾಮಗಾರಿಗೆ ಅನುಮೋದನೆ ನೀಡಿತ್ತು. ಅದರಲ್ಲಿ ₹ 90 ಲಕ್ಷ ವೆಚ್ಚದ ಕಾಮಗಾರಿ ನಡೆದಿವೆ. ಇನ್ನೂ ಕೆಲಸ ಬಾಕಿಯಿದೆ. ಬೇಗ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.</p>.<p><strong>ಮಳೆಯಿಂದಾಗಿ ಕುಸಿದು ಬಿದ್ದಿರುವ ಗೋಪುರ ಪುನರ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಕಾಮಗಾರಿ ನಡೆಸಲಾಗುವುದು</strong></p><p><strong>–ಸಂಜೀವ ಮಿರಜಕರ, ಎಇಇ, ಲೋಕೋಪಯೋಗಿ ಇಲಾಖೆ</strong></p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು</strong>: ಕಿತ್ತೂರು ಸಂಸ್ಥಾನ ಕಾಲದ ಐತಿಹಾಸಿಕ ಗಡಾದ ಮರಡಿ ಮೇಲಿನ ವೀಕ್ಷಣಾ ಗೋಪುರ ಕುಸಿದು ಬಿದ್ದು ಎರಡು ವರ್ಷ ಸಮೀಪಿಸುತ್ತಿದೆ. ಆದರೂ, ಅದನ್ನು ಪುನರ್ ನಿರ್ಮಿಸುವ ಗೋಜಿಗೆ ಸರ್ಕಾರ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.</p>.<p>ಕಿತ್ತೂರು ಕೋಟೆ, ವಸ್ತು ಸಂಗ್ರಹಾಲಯ, ದೊರೆಗಳ ಸಮಾಧಿ ತಾಣಗಳು, ರಾಜಗುರುಗಳ ಕಲ್ಮಠ ಮತ್ತು ಗಡಾದ ಮರಡಿ ವೀಕ್ಷಿಸಲು ಪ್ರವಾಸಿಗರು ಬರುತ್ತಾರೆ. ಪಾಳು ಬಿದ್ದ ಕೋಟೆ ವೀಕ್ಷಿಸಿ ಗಡಾದ ಮರಡಿಗೆ ಆಗಮಿಸಿದರೆ, ‘ಇದನ್ನೂ ಬ್ರಿಟಿಷರು ಕೆಡವಿದ್ದಾರೆಯೇ’ ಎಂಬ ಪ್ರಶ್ನೆಯನ್ನು ಪ್ರವಾಸಿಗರು ಕೇಳುವಂತಾಗಿದೆ.</p>.<p>ದೊರೆಗಳ ಕಾಲದಲ್ಲಿ ವೈರಿಗಳ ಚಲನ– ವಲನಗಳ ಮೇಲೆ ನಿಗಾ ಇರಿಸುವ ವೀಕ್ಷಣಾ ಗೋಪುರವಾಗಿದ್ದ ಈ ಐತಿಹಾಸಿಕ ಗಡಾದ ಮರಡಿಗೆ ತನ್ನದೇ ಆದ ಇತಿಹಾಸವಿದೆ. ಗೋಪುರದ ಮೇಲೆ ನಿಂತು ನೋಡಿದರೆ ಹತ್ತಾರು ಕಿ.ಮೀ ದೂರದವರೆಗಿನ ಪ್ರದೇಶ ಕಣ್ಣಿಗೆ ಗೋಚರಿಸುತ್ತದೆ. ನೀಲಗಿರಿ ಗಿಡಗಳು ಬೆಳೆಯುವ ಮುನ್ನ ಧಾರವಾಡ ವಿಶ್ವವಿದ್ಯಾಲಯದ ಗೋಪುರ ಕಣ್ಣಿನ ನೋಟಕ್ಕೆ ಸಿಗುತ್ತಿತ್ತು ಎಂದು ಇಲ್ಲಿನ ಹಿರಿಯರು ನೆನಪಿಸುತ್ತಾರೆ.</p>.<p>ಮಹತ್ವದ ಸಂಗತಿಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಈ ಮಹತ್ವದ ತಾಣದ ಅಭಿವೃದ್ಧಿಗಾಗಿ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಮಹಾಂತೇಶ ದೊಡ್ಡಗೌಡರ ಒತ್ತಾಸೆಯಿಂದ ಬಿಜೆಪಿ ಸರ್ಕಾರವು ₹ 1.80 ಕೋಟಿ ಬಿಡುಗಡೆ ಮಾಡಿತ್ತು. ಅದರ ಸೌಂದರ್ಯ ಹೆಚ್ಚಿಸಿ ಆಕರ್ಷಣೀಯ ತಾಣವಾಗಿ ರೂಪಿಸಲು ಯೋಜನೆ ರೂಪಿಸಲಾಗಿತ್ತು. ಮರಡಿಗೆ ತೆರಳುವ ರಸ್ತೆ ಸುಧಾರಣೆ, ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ, ಮರಡಿ ಬಳಿ ತಿನಿಸು ಕಟ್ಟೆ ನಿರ್ಮಾಣ, ಮರಡಿಗೆ ಹೊಸ ರೂಪ ನೀಡುವ ಕಾಮಗಾರಿ ಯೋಜನೆಯಲ್ಲಿದ್ದವು.</p>.<p>ಇದರಲ್ಲಿ ಕೆಲ ಕಾಮಗಾರಿ ನಡೆದಿವೆ. ಮರಡಿ ಮಧ್ಯ ಸುಮಾರು 80 ಅಡಿ ಎತ್ತರದ ಧ್ವಜಸ್ತಂಭ ಅನಾವರಣ ಮಾಡಲಾಗಿತ್ತು. ಜ. 26 ಹಾಗೂ ಆ. 15ಕ್ಕೆ ಇಲ್ಲಿ ವಿಶಾಲವಾದ ರಾಷ್ಟ್ರಧ್ವಜಾರೋಹಣ ಮಾಡಲಾಗುತ್ತಿತ್ತು.</p>.<p>ಎರಡ್ಮೂರು ಬಾರಿ ಧ್ವಜಾರೋಹಣಕ್ಕೂ ಈ ತಾಣ ಸಾಕ್ಷಿಯಾಗಿ, ನೋಡುಗರಲ್ಲಿ ಪುಳಕ ಉಂಟುಮಾಡಿತ್ತು. ಆದರೆ, 2024ರಲ್ಲಿ ಸುರಿದ ಮಳೆಗೆ ನವೀಕರಣಗೊಂಡಿದ್ದ ಗೋಪುರ ಕುಸಿದು ಬಿತ್ತು. ಯೋಚಿಸದೇ ನಡೆಸಿದ ಕಾಮಗಾರಿಗೆಯಿಂದಾಗಿ ಗೋಪುರದ ಮೇಲೆ ನೀರು ಸಂಗ್ರಹಗೊಂಡು ಕೆಳಗೆ ಬಸಿದಿದ್ದು ಇದಕ್ಕೆ ಕಾರಣವಾಯಿತು. ಅನಂತರ ಪ್ರವಾಸಿಗರು ಮತ್ತು ಜನರ ಓಡಾಟವನ್ನು ಈ ಪ್ರದೇಶದಲ್ಲಿ ನಿಷೇಧಿಸಲಾಯಿತು ಎಂದು ಇಲ್ಲಿನವರು ಹೇಳುತ್ತಾರೆ.</p>.<p>ಗೋಪುರದ ಒಂದು ಭಾಗ ಬಿದ್ದಿದ್ದರೂ ಆಡಳಿತ ವ್ಯವಸ್ಥೆಯಿಂದಾಗಿ ಇದೂ ಒಂದು ಸ್ಮಾರಕವಾಗಿ ಮೂಕರೋದನ ಅನುಭವಿಸುತ್ತ ನಿಂತಂತೆ ಭಾಸವಾಗುತ್ತದೆ ಎನ್ನುತ್ತಾರೆ ಜನರು.</p>.<p>ಗಡಾದ ಮರಡಿ ಅಭಿವೃದ್ಧಿಗಾಗಿ ಹಿಂದಿನ ಸರ್ಕಾರ ₹ 1.80 ಕೋಟಿ ಕಾಮಗಾರಿಗೆ ಅನುಮೋದನೆ ನೀಡಿತ್ತು. ಅದರಲ್ಲಿ ₹ 90 ಲಕ್ಷ ವೆಚ್ಚದ ಕಾಮಗಾರಿ ನಡೆದಿವೆ. ಇನ್ನೂ ಕೆಲಸ ಬಾಕಿಯಿದೆ. ಬೇಗ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.</p>.<p><strong>ಮಳೆಯಿಂದಾಗಿ ಕುಸಿದು ಬಿದ್ದಿರುವ ಗೋಪುರ ಪುನರ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಕಾಮಗಾರಿ ನಡೆಸಲಾಗುವುದು</strong></p><p><strong>–ಸಂಜೀವ ಮಿರಜಕರ, ಎಇಇ, ಲೋಕೋಪಯೋಗಿ ಇಲಾಖೆ</strong></p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>