ಬೆಳಗಾವಿ: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ತನಗೆ ಮತ ಚಲಾಯಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಬೆನ್ನಾಳ ಗ್ರಾಮದ ಸಾತೇರಿ ಬೈರು ಆನಂದಾಚೆ ಎಂಬುವವರನ್ನು ಅಭ್ಯರ್ಥಿ ಕಲ್ಲಪ್ಪ ನಿಂಗಪ್ಪ ಗಿರಿಯಣ್ಣವರ ಅಪಹರಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಕಳೆದ 21ರಂದು ಬೆಂಬಳಗಾ ಗ್ರಾಮದ ಕಲ್ಲಪ್ಪ ನಿಂಗಪ್ಪ ಗಿರಿಯಣ್ಣವರ ಅವರು ಸಾತೇರಿ ಅವರನ್ನು ಅಪಹರಿಸಿದ್ದಾರೆ ಎಂದು ಕುಟುಂಬಸ್ಥರು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಾತೇರಿ ಅವರು ಬೆನ್ನಾಳ ಗ್ರಾಮದ ಹಾಲು ಒಕ್ಕೂಟದ ಸದಸ್ಯರಾಗಿದ್ದಾರೆ. ಇದೇ ಭಾನುವಾರ (ಏ.28) ಒಕ್ಕೂಟದ 7 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಲ್ಲಪ್ಪ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.