ಮೂಡಲಗಿ ತಾಲ್ಲೂಕಿನ ರಾಜಾಪುರದ ಬಾಳೇಶ ಕೆಂಚಪ್ಪ ಕಟ್ಟಿಕಾರ್ (26) ಬಂಧಿತ. ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ. ಇದೇ ಪ್ರಕರಣದಲ್ಲಿ ಆರೋಪಿತರಾದ ಸಂಜೀವ್ ಭಂಡಾರಿ, ಮಂಜುನಾಥ ಮಾಳಿ ಮತ್ತು ಶ್ರೀಧರ ಕಟ್ಟಿಕಾರ ಇವರೊಂದಿಗೆ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಭ್ಯರ್ಥಿಗಳಿಗೆ ಪೂರೈಸಿದ್ದ ಎಂದು ತನಿಖಾಧಿಕಾರಿ, ಗೋಕಾಕ ಡಿವೈಎಸ್ಪಿ ವೀರೇಶ ತಿ. ದೊಡಮನಿ ತಿಳಿಸಿದ್ದಾರೆ.