ಕಂಗ್ರಾಳಿ ಕೆ.ಎಚ್. ಗ್ರಾಮದ ಸ್ಥಳೀಯ ಜನಪ್ರತಿನಿಧಿಗಳು ಭೇಟಿಯಾಗಿ ಗ್ರಾಮದ ಅನೇಕ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಿದರು. ‘ಶಿವಾಜಿ ಪ್ರತಿಮೆ ಸ್ಥಳದಿಂದ ಕಲ್ಮೇಶ್ವರ ನಗರದವರೆಗೆ ಸಿ.ಸಿ. ರಸ್ತೆ ನಿರ್ಮಾಣ, ಸ್ಮಶಾನ ಭೂಮಿಯ ಸಲುವಾಗಿ ಪ್ರತ್ಯೇಕ ಸ್ಥಳ ಮಂಜೂರು, ನಾರಾಯಣ ಗಲ್ಲಿಯ ಮಂಗಲ ಕಾರ್ಯಾಲಯದಿಂದ ಕಾಳಾ ಕಟ್ಟಾವರೆಗೆ ಚರಂಡಿ ನಿರ್ಮಾಣ ಮತ್ತು ರೈತರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಕಾಳಾ ಕಟ್ಟಾ ಹತ್ತಿರ ಸೇತುವೆ ನಿರ್ಮಿಸಿಕೊಡುವಂತೆ’ ಕೋರಿದರು.