ಕೊಂಡಸಕೊಪ್ಪದ ಕಲ್ಲಪ್ಪ ಸಿ. ಸಾಂಬ್ರೆಕರ್ (45) ಹಾಗೂ ಶಿಂದೋಳಿಯ ನಿವಾಸಿ ಪರಶುರಾಮ ಗ. ಶಹಪೂರಕರ (17) ಆಡುಗಳನ್ನು ಮೇಯಿಸುವ ಸಲುವಾಗಿ ಕಮಕಾರಟ್ಟಿ ಹೋಗಿದ್ದರು. ಮಧ್ಯಾಹ್ನ ಸುರಿದ ಭಾರಿ ಮಳೆಯಿಂದ ರಕ್ಷಿಸಿಕೊಳ್ಳಲು ಹೊಲದಲ್ಲಿನ ಶೆಡ್ ಹತ್ತಿರ ಹೋಗಿದ್ದಾರೆ. ಮಣ್ಣಿನಿಂದ ನಿರ್ಮಿಸಿದ ಗೋಡೆ ಅವರ ಮೇಲೆ ಕುಸಿದು ಬಿದ್ದ ಕಾರಣ ಮೃತರಾಗಿದ್ದಾರೆ.