ಶಾಲೆ ವತಿಯಿಂದ ಧ್ವಜಾರೋಹಣ ನೆರವೇರಿಸಲಾಗಿತ್ತು. ‘ಕೆಲ ಸಮಯದ ನಂತರ ಬಂದ ಆನಂದ, ಈ ಮೈದಾನ ತನ್ನದೆಂದು ವಾದಿಸಿ ಧ್ವಜಕಂಬವನ್ನು ಕಿತ್ತು ಹಾಕಿದ್ದರು. ಸ್ಥಳೀಯರು ಕೂಡಲೇ ಅವರನ್ನು ಹಿಡಿದು ತಂದು ಧ್ವಜ ಕಂಬ ನೆಟ್ಟು ಮತ್ತೊಮ್ಮೆ ಧ್ವಜಾರೋಹಣ ಮಾಡಿದ್ದಾರೆ. ಅಲ್ಲದೇ, ಧ್ವಜ ಕಂಬಕ್ಕೆ ಆನಂದ ಅವರಿಂದ ದೀಡ್ ನಮಸ್ಕಾರ ಹಾಕಿಸಿ, ಬುದ್ಧಿವಾದ ಹೇಳಿದ್ದಾರೆ. ವ್ಯಕ್ತಿ ತನ್ನಿಂದಾದ ಪ್ರಮಾದವನ್ನು ಒಪ್ಪಿಕೊಂಡು ನಮಸ್ಕಾರ ಮಾಡಿದ್ದಾರೆ’ ಎಂದು ತಿಳಿದುಬಂದಿದೆ.