ಅಥಣಿ: ‘ಚುನಾವಣೆ ಕುರಿತು ಒಬ್ಬ ವಕೀಲನಿಗೆ ಇರುವಷ್ಟು ಮಾಹಿತಿ ನಿಮಗೆ ತಿಳಿದಿದೆಯೇ? ನಿಮ್ಮ ವಿದ್ಯಾರ್ಹತೆ ಏನು?’ ಎಂದು ವಾಯವ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಅವರು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಪ್ರಶ್ನಿಸಿದರು.
‘ಕಾಂಗ್ರೆಸ್ ಅಭ್ಯರ್ಥಿಗೆ ವಾಯವ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯೇ ಗೊತ್ತಿಲ್ಲ’ ಎಂಬ ಸವದಿ ಹೇಳಿಕೆಗೆ, ಪಟ್ಟಣದಲ್ಲಿ ಗುರುವಾರ ಸುದ್ದಿಗಾರರಿಗೆ ಮೇಲಿನಂತೆ ಅವರು ಪ್ರತಿಕ್ರಿಯಿಸಿದರು.
‘ನಾನೊಬ್ಬ ವಕೀಲ. ನನಗೆ ಚುನಾವಣೆ, ಕ್ಷೇತ್ರವ್ಯಾಪ್ತಿ ಬಗ್ಗೆ ತಿಳಿದಿದೆ ಎಂಬ ಅರಿವು ಸವದಿ ಅವರಿಗಿಲ್ಲ ಎನಿಸುತ್ತದೆ. ಮೇಲಾಗಿ, ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಸೋಲಿನ ಭಯ ಅವರನ್ನು ಕಾಡುತ್ತಿದೆ. ಹಾಗಾಗಿ ಹತಾಶೆ ಮನೋಭಾವದಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.