‘ಕಳೆದ ವರ್ಷ ನೆರೆಯಿಂದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹಾನಿಗೆ ಒಳಗಾದ 10 ಸಾವಿರ ವಿದ್ಯುತ್ ಮಗ್ಗಗಳಿಗೆ ತಲಾ ₹25 ಸಾವಿರ ಪರಿಹಾರ ನೀಡಲು 2019ರ ಅ.3ರಂದು ಬೆಳಗಾವಿಯಲ್ಲಿ ಹಾಗೂ ಅ.4ರಂದು ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಅ.18ರಂದು ಅಧಿಕೃತ ಆದೇಶ ಹೊರಡಿಸಿತ್ತು. ಆದರೆ, ಅ.24ರಂದು ಕಂದಾಯ ಇಲಾಖೆಯಿಂದ ತಿದ್ದುಪಡಿ ಆದೇಶ ಹೊರಡಿಸಿ ತಲಾ ಮಗ್ಗದ ಬದಲಿಗೆ ತಲಾ ಕುಟುಂಬಕ್ಕೆ ಎಂದು ತಿಳಿಸಲಾಯಿತು. 2 ಮಗ್ಗಗಳು ಹಾನಿ ಆದವರಿಗೂ ₹ 25ಸಾವಿರ, 20 ಮಗ್ಗಗಳು ಹಾನಿಗೊಳಗಾದವರಿಗೂ ₹ 25ಸಾವಿರ ಪರಿಹಾರ ಕೊಡಲಾಯಿತು. ಇದು ಯಾವ ನ್ಯಾಯ?’ ಎಂದು ಕೇಳಿದರು.