ಆಕಾಂಕ್ಷಿಗಳಾದ ರಮೇಶ ಕತ್ತಿ, ಅಮರಸಿಂಹ ಪಾಟೀಲ, ರಾಜು ಚಿಕ್ಕನಗೌಡರ, ಡಾ.ರವಿ ಪಾಟೀಲ, ಕಿರಣ್ ಜಾಧವ್, ಸಂಜಯ ಪಾಟೀಲ, ರಮೇಶ ದೇಶಪಾಂಡೆ, ರಾಜು ಟೋಪಣ್ಣವರ, ರುದ್ರಣ್ಣ ಚಂದರಗಿ ಮೊದಲಾದವರು ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೊಂದೆಡೆ ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡುವಂತೆ ಕೆಲವು ನಾಯಕರು ಹಾಗೂ ಬೆಂಬಲಿಗರು ಆಗ್ರಹ ಮಂಡಿಸಿದ್ದಾರೆ. ತಮ್ಮೊಂದಿಗೆ ಆಪ್ತ ಒಡನಾಟದಲ್ಲಿರುವ ನಾಯಕರ ಮೂಲಕ ಲಾಬಿ ನಡೆಸಿದ್ದಾರೆ.