‘ಮುಂದಿನ ಚುನಾವಣೆಯನ್ನು ಗೋಕಾಕದ ಹಿಲ್ ಗಾರ್ಡನ್ (ಸತೀಶ ನಿವಾಸ)ನಿಂದಲೇ ನಡೆಸೋಣ’ ಎಂಬ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ, ‘ಅವರು ಏನು ಹೇಳಿದ್ದಾರೆ ಎನ್ನುವುದು ಯಾರಿಗೂ ಅರ್ಥವಾಗಿಲ್ಲ. ನಾವು ಯಾವುದೇ ಚುನಾವಣೆಯನ್ನು ಕೇಂದ್ರೀಕೃತವಾಗಿ ನಡೆಸಿಲ್ಲ. ಅವರು ಮಾತ್ರ ಅಧಿಕಾರವನ್ನು ಕೈಯಲ್ಲೇ ಹಿಡಿದುಕೊಂಡಿರುತ್ತಾರೆ’ ಎಂದು ತಿರುಗೇಟು ನೀಡಿದರು.