ಇಲ್ಲಿನ ಮೀರಜ್ ರಸ್ತೆಗೆ ರಸ್ತೆಗೆ ಹೊಂದಿಕೊಂಡಿದ್ದ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿದ್ದ 21 ಕುಟುಂಬಗಳಲ್ಲಿ ಮಹಾದೇವಿ ಕುಟುಂಬವೂ ಒಂದು. ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ನಿರ್ಮಾಣಕ್ಕೆಂದು ಆಗಿನ ಶಾಸಕ ಲಕ್ಷ್ಮಣ ಸವದಿ, ಅಥಣಿ ತಹಶೀಲ್ದಾರ್, ಚಿಕ್ಕೋಡಿಯ ಆಗಿನ ಪ್ರಭಾರ ಎಸಿ, ಪುರಸಭೆ ಅಧಿಕಾರಿ ಮೊದಲಾದವರು ತೆರವುಗೊಳಿಸಿದ್ದರು. ಈ ಕುಟುಂಬಗಳಿಗೆ ಜಾಗ ಹಾಗೂ ಮನೆ ಮಂಜೂರು ಮಾಡಿಸಿಕೊಡುವುದಾಗಿ ಸವದಿ ಭರವಸೆ ನೀಡಿದ್ದರು. ಇದಾಗಿ ನಾಲ್ಕು ವರ್ಷಗಳೇ ಕಳೆದಿದ್ದರೂ ಭರವಸೆ ಈಡೇರಿಲ್ಲ!