‘ಶಿವರಾತ್ರಿ ಪ್ರಯುಕ್ತ ಉಪವಾಸ ವ್ರತ ಮತ್ತು ಶಿವನ ಮೂರ್ತಿ ದರ್ಶನಕ್ಕೆ ಬರುವವರಿಗೆ ಪ್ರಸಾದದ ವ್ಯವಸ್ಥೆಯನ್ನು ಸಮಿತಿ ಮಾಡಿದೆ. ಇದಕ್ಕಾಗಿ 3 ಟನ್ ಖರ್ಜೂರ, 3 ಟನ್ ಸಾಬೂದಾನಿ, 3 ಟನ್ ಕುದಿಸಿದ ಶೇಂಗಾ ಮತ್ತು 4 ಟನ್ ಬಾಳೆ ಹಣ್ಣು ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಅಶೋಕ ಪಟ್ಟಣ ತಿಳಿಸಿದರು.