ಬಳಿಕ ಗಣ್ಯರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಮಹಾವೀರರ ಜೀವನ ಕುರಿತ ವಿವಿಧ ಸಂದೇಶಗಳನ್ನು ಸಾರುವ ರೂಪಕ ವಾಹನಗಳು ಪಾಲ್ಗೊಂಡಿದ್ದವು. ಖಡೇಬಜಾರ್ ಮಾರುತಿಮಂದಿರದಿಂದ ಪ್ರಾರಂಭವಾದ ಯಾತ್ರೆ ರಾಮದೇವ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಟಿಳಕ ಚೌಕ, ಶೇರಿ ಗಲ್ಲಿ, ಕಪಿಲೇಶ್ವರ ಸೇತುವೆ, ಎಸ್.ಪಿ.ಎಂ. ರಸ್ತೆ, ಶಹಾಪುರ ಕೋರೆ ಗಲ್ಲಿ ಮೂಲಕ ಹಿಂದವಾಡಿಯ ಮಹಾವೀರ ಭವನದಲ್ಲಿ ಮುಕ್ತಾಯಗೊಂಡಿತು. ಜಿತೋ ಸಂಸ್ಥೆ, ಟಿಳಕಚೌಕದ ವೀರಸೇನಾ ಯುವಕ ಮಂಡಳ ಮೊದಲಾದ ಸಂಸ್ಥೆಗಳ ಮೂಲಕ ತಂಪುಪಾನೀಯ ವ್ಯವಸ್ಥೆ ಮಾಡಲಾಗಿತ್ತು.