<p><strong>ಎಂ.ಕೆ.ಹುಬ್ಬಳ್ಳಿ:</strong> ಹಳೆಯದಾಗಿರುವ ಕಾರ್ಖಾನೆಯ ಯಂತ್ರೋಪಕರಣಗಳಲ್ಲಿ ಒಂದಿಷ್ಟು ಮಾರ್ಪಾಡು ಮಾಡಿ, ಮುಂಬರುವ ಹಂಗಾಮಿನಲ್ಲಿ ದಿನಕ್ಕೆ ಸರಾಸರಿ 4ರಿಂದ 5ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆದು, ಕಾರ್ಖಾನೆ ಮೇಲಿರುವ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಯೋಜನೆ ರೂಪಿಸಿದ್ದೇವೆ ಎಂದು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.</p>.<p>ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಂತ್ರೋಪಕರಣಗಳ ಮಾರ್ಪಾಡಿಗೆ ಸುಮಾರು ₹12ಕೋಟಿಗೂ ಅಧಿಕ ವೆಚ್ಚವಾಗಲಿದೆ. ಆರ್ಥಿಕ ಸಹಾಯಕ್ಕೆ ಜಿಲ್ಲಾ ಮಧ್ಯವರ್ತಿ(ಬಿಡಿಸಿಸಿ)ಬ್ಯಾಂಕ್ಗೆ ಮನವಿ ಮಾಡಿದ್ದೇವೆ. ಮುಂಬರುವ ಹಂಗಾಮಿನಲ್ಲಿ 100 ದಿನಗಳ ಅವಧಿಯಲ್ಲಿ ಸುಮಾರು 4ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿಯಿದೆ. ಅದಕ್ಕಾಗಿ ಅಗತ್ಯ ಕಟಾವು ಮತ್ತು ಸಾರಿಗೆ ತಂಡವನ್ನು ಈಗಿನಿಂದಲೇ ತಯಾರಿ ಮಾಡುತ್ತಿದ್ದೇವೆ. ರೈತರಿಗೆ 15 ದಿನಕ್ಕೊಮ್ಮೆ ಹೇಗಾದರೂ ಮಾಡಿ ಬಿಲ್ ಪಾವತಿಸಲು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.</p>.<p>ಕಾರ್ಖಾನೆ ತಾಂತ್ರಿಕ ತೊಂದರೆ ನಡುವೆಯೇ ಇಳುವರಿ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಒಟ್ಟು 2.33ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 2.63 ಲಕ್ಷ ಚೀಲ ಸಕ್ಕರೆ ಉತ್ಫಾದಿಸಿದ್ದೇವೆ. ಮೊಲ್ಯಾಸಿಸ್ ಮತ್ತು ಸ್ಪೀರಿಟ್ ಉತ್ಪಾದನೆಯು ಅತ್ಯಧಿಕವಾಗಿದ್ದು, ಸುಮಾರು 5 ಸಾವಿರ ಟನ್ ಬಗ್ಯಾಸ್ ಉಳಿಸಿದ್ದೇವೆ. ಪ್ರತಿವರ್ಷ ಇತರೆ ಕಾರ್ಖಾನೆಗಳಿಂದ ಬಗ್ಯಾಸ್ ಖರೀದಿಸಿ ಕಾರ್ಖಾನೆ ಆರಂಭಿಸಬೇಕಿತ್ತು. ಈಗ ನಾವೇ ಸುಮಾರು 3ಸಾವಿರ ಟನ್ ಬಗ್ಯಾಸ್ (ಕಬ್ಬಿನ ಹಿಪ್ಪಿ) ಇತರೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದೇವೆ ಎಂದರು.</p>.<p>ಈಗಾಗಲೇ ಪೂರ್ಣಗೊಂಡ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ನೀಡಬೇಕಿದ್ದ ಒಟ್ಟು ₹75ಕೋಟಿ ಪೈಕಿ ₹65.8ಕೋಟಿ ಹಣ ಈಗಾಗಲೇ ಪಾವತಿಸಿದ್ದು, ಸರ್ಕಾರದ ನಿರ್ದೇಶನದ ಪ್ರತಿಟನ್ಗೆ ₹50 ಸೇರಿ ಸುಮಾರು ₹9ಕೋಟಿ ಮಾತ್ರ ಬಾಕಿಯಿದೆ. ಇನ್ನೊಂದು ವಾರದಲ್ಲಿ ಪಾವತಿಸುತ್ತೇವೆ. ಕಾರ್ಖಾನೆಯಲ್ಲಿ ದುಡಿದು ನಿವೃತ್ತಿಯಾಗಿರುವ ಬಹಳಷ್ಟು ನೌಕಕರು, ಕಾರ್ಮಿಕರಿಗೆ 2012ರಿಂದ ಗ್ರಾಚ್ಯುಟಿ ನೀಡಿಲ್ಲ. ಸುಮಾರು ₹3ಕೋಟಿಯಷ್ಟು ಬಾಕಿಯಿದೆ. ಅದನ್ನು ಸಹ ನಮ್ಮ ಆಡಳಿತ ಮಂಡಳಿ ಹಂತಹಂತವಾಗಿ ನೀಡಲು ನಿರ್ಧರಿಸಿದೆ ಎಂದರು. </p>.<p><strong>ಕೊಟ್ಟ ಮಾತಿನಂತೆ ಸಕ್ಕರೆ ವಿತರಣೆ;</strong><br> ಚುನಾವಣೆಯಲ್ಲಿ ರೈತರಿಗೆ ಕೊಟ್ಟ ಮಾತಿನಂತೆ ಕಾರ್ಖಾನೆ ಅ-ವರ್ಗದ 16,903 ಷೇರುದಾರರಿಗೆಲ್ಲ ತಲಾ 25ಕೆಜಿ ಮತ್ತು ಕಬ್ಬು ಪೂರೈಸಿದ ರೈತರಿಗೆ ಪ್ರತಿಟನ್ ಕಬ್ಬಿಗೆ 250ಗ್ರಾಂ ಸಕ್ಕರೆಯನ್ನು ಪ್ರತಿ ಕೆ.ಜಿಗೆ ₹20 ದರದಂತೆ ವಿತರಿಸುತ್ತೇವೆ. ಕಾರ್ಖಾನೆ ಹಂಗಾಮು ಯಶಸ್ವಿಗೆ ಶ್ರಮಿಸಿದ ಕಾರ್ಮಿಕರು ಮತ್ತು ನೌಕರರಿಗೆಲ್ಲ ತಲಾ ₹10ಕೆ.ಜಿ ಸಕ್ಕರೆಯನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.</p>.<p>ಕಾರ್ಖಾನೆ ಉಪಾಧ್ಯಕ್ಷ ಶಿವನಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ, ನಿರ್ದೇಶಕರಾದ ಶಂಕ್ರೆಪ್ಪ ಹೊಳಿ, ರಾಮನಗೌಡ ಪಾಟೀಲ, ಸುರೇಶ ಹುಲಿಕಟ್ಟಿ, ರಘು ಪಾಟೀಲ, ಭರಮಪ್ಪ ಶಿಗೆಹಳ್ಳಿ, ಬಾಳಪ್ಪ ಪೂಜಾರ, ಕಚೇರಿ ಅಧಿಕ್ಷಕ ಎಸ್.ಜಿ.ಹೆಗಡೆ ಹಾಗೂ ಇತರರು ಇದ್ದರು.</p>.<h2>‘ಕೇಂದ್ರ ಸರ್ಕಾರ ಎಂಎಸ್ಪಿ ಹೆಚ್ಚಿಸಲಿ‘</h2><p>‘ಕೇಂದ್ರ ಸರ್ಕಾರ 2019ರ ನಂತರ ಎಂಎಸ್ಪಿ ಹೆಚ್ಚಿಸಿಲ್ಲ. ಇದರಿಂದ ಸಕ್ಕರೆ ದರ ಕಾರ್ಖಾನೆಗಳಲ್ಲಿ ಏರಿಕೆ ಕಂಡಿಲ್ಲ. ಈ ದರದಲ್ಲಿ ಬರುವ ಹಣ ರೈತರ ಕಬ್ಬಿನ ಬಿಲ್ ಕಾರ್ಖಾನೆ ನಿರ್ವಹಣೆ ಕಷ್ಟವಾಗುತ್ತಿದೆ. ರೈತರು ಪೂರೈಸಿದ ಕಬ್ಬಿನ ಬಿಲ್ ಪಾವತಿ ವಿಳಂಬಕ್ಕೂ ಇದು ಕಾರಣವಾಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಸಕ್ಕರೆ ಎಂಎಸ್ಪಿಯನ್ನು ₹45 ಗೆ ಹೆಚ್ಚಿಸಬೇಕೆಂಬುದು ನಮ್ಮೆಲ್ಲ ಕಾರ್ಖಾನೆಗಳ ಆಗ್ರಹವಾಗಿದೆ’ ಎಂದು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಂ.ಕೆ.ಹುಬ್ಬಳ್ಳಿ:</strong> ಹಳೆಯದಾಗಿರುವ ಕಾರ್ಖಾನೆಯ ಯಂತ್ರೋಪಕರಣಗಳಲ್ಲಿ ಒಂದಿಷ್ಟು ಮಾರ್ಪಾಡು ಮಾಡಿ, ಮುಂಬರುವ ಹಂಗಾಮಿನಲ್ಲಿ ದಿನಕ್ಕೆ ಸರಾಸರಿ 4ರಿಂದ 5ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆದು, ಕಾರ್ಖಾನೆ ಮೇಲಿರುವ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಯೋಜನೆ ರೂಪಿಸಿದ್ದೇವೆ ಎಂದು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.</p>.<p>ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಂತ್ರೋಪಕರಣಗಳ ಮಾರ್ಪಾಡಿಗೆ ಸುಮಾರು ₹12ಕೋಟಿಗೂ ಅಧಿಕ ವೆಚ್ಚವಾಗಲಿದೆ. ಆರ್ಥಿಕ ಸಹಾಯಕ್ಕೆ ಜಿಲ್ಲಾ ಮಧ್ಯವರ್ತಿ(ಬಿಡಿಸಿಸಿ)ಬ್ಯಾಂಕ್ಗೆ ಮನವಿ ಮಾಡಿದ್ದೇವೆ. ಮುಂಬರುವ ಹಂಗಾಮಿನಲ್ಲಿ 100 ದಿನಗಳ ಅವಧಿಯಲ್ಲಿ ಸುಮಾರು 4ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿಯಿದೆ. ಅದಕ್ಕಾಗಿ ಅಗತ್ಯ ಕಟಾವು ಮತ್ತು ಸಾರಿಗೆ ತಂಡವನ್ನು ಈಗಿನಿಂದಲೇ ತಯಾರಿ ಮಾಡುತ್ತಿದ್ದೇವೆ. ರೈತರಿಗೆ 15 ದಿನಕ್ಕೊಮ್ಮೆ ಹೇಗಾದರೂ ಮಾಡಿ ಬಿಲ್ ಪಾವತಿಸಲು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.</p>.<p>ಕಾರ್ಖಾನೆ ತಾಂತ್ರಿಕ ತೊಂದರೆ ನಡುವೆಯೇ ಇಳುವರಿ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಒಟ್ಟು 2.33ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 2.63 ಲಕ್ಷ ಚೀಲ ಸಕ್ಕರೆ ಉತ್ಫಾದಿಸಿದ್ದೇವೆ. ಮೊಲ್ಯಾಸಿಸ್ ಮತ್ತು ಸ್ಪೀರಿಟ್ ಉತ್ಪಾದನೆಯು ಅತ್ಯಧಿಕವಾಗಿದ್ದು, ಸುಮಾರು 5 ಸಾವಿರ ಟನ್ ಬಗ್ಯಾಸ್ ಉಳಿಸಿದ್ದೇವೆ. ಪ್ರತಿವರ್ಷ ಇತರೆ ಕಾರ್ಖಾನೆಗಳಿಂದ ಬಗ್ಯಾಸ್ ಖರೀದಿಸಿ ಕಾರ್ಖಾನೆ ಆರಂಭಿಸಬೇಕಿತ್ತು. ಈಗ ನಾವೇ ಸುಮಾರು 3ಸಾವಿರ ಟನ್ ಬಗ್ಯಾಸ್ (ಕಬ್ಬಿನ ಹಿಪ್ಪಿ) ಇತರೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದೇವೆ ಎಂದರು.</p>.<p>ಈಗಾಗಲೇ ಪೂರ್ಣಗೊಂಡ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ನೀಡಬೇಕಿದ್ದ ಒಟ್ಟು ₹75ಕೋಟಿ ಪೈಕಿ ₹65.8ಕೋಟಿ ಹಣ ಈಗಾಗಲೇ ಪಾವತಿಸಿದ್ದು, ಸರ್ಕಾರದ ನಿರ್ದೇಶನದ ಪ್ರತಿಟನ್ಗೆ ₹50 ಸೇರಿ ಸುಮಾರು ₹9ಕೋಟಿ ಮಾತ್ರ ಬಾಕಿಯಿದೆ. ಇನ್ನೊಂದು ವಾರದಲ್ಲಿ ಪಾವತಿಸುತ್ತೇವೆ. ಕಾರ್ಖಾನೆಯಲ್ಲಿ ದುಡಿದು ನಿವೃತ್ತಿಯಾಗಿರುವ ಬಹಳಷ್ಟು ನೌಕಕರು, ಕಾರ್ಮಿಕರಿಗೆ 2012ರಿಂದ ಗ್ರಾಚ್ಯುಟಿ ನೀಡಿಲ್ಲ. ಸುಮಾರು ₹3ಕೋಟಿಯಷ್ಟು ಬಾಕಿಯಿದೆ. ಅದನ್ನು ಸಹ ನಮ್ಮ ಆಡಳಿತ ಮಂಡಳಿ ಹಂತಹಂತವಾಗಿ ನೀಡಲು ನಿರ್ಧರಿಸಿದೆ ಎಂದರು. </p>.<p><strong>ಕೊಟ್ಟ ಮಾತಿನಂತೆ ಸಕ್ಕರೆ ವಿತರಣೆ;</strong><br> ಚುನಾವಣೆಯಲ್ಲಿ ರೈತರಿಗೆ ಕೊಟ್ಟ ಮಾತಿನಂತೆ ಕಾರ್ಖಾನೆ ಅ-ವರ್ಗದ 16,903 ಷೇರುದಾರರಿಗೆಲ್ಲ ತಲಾ 25ಕೆಜಿ ಮತ್ತು ಕಬ್ಬು ಪೂರೈಸಿದ ರೈತರಿಗೆ ಪ್ರತಿಟನ್ ಕಬ್ಬಿಗೆ 250ಗ್ರಾಂ ಸಕ್ಕರೆಯನ್ನು ಪ್ರತಿ ಕೆ.ಜಿಗೆ ₹20 ದರದಂತೆ ವಿತರಿಸುತ್ತೇವೆ. ಕಾರ್ಖಾನೆ ಹಂಗಾಮು ಯಶಸ್ವಿಗೆ ಶ್ರಮಿಸಿದ ಕಾರ್ಮಿಕರು ಮತ್ತು ನೌಕರರಿಗೆಲ್ಲ ತಲಾ ₹10ಕೆ.ಜಿ ಸಕ್ಕರೆಯನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.</p>.<p>ಕಾರ್ಖಾನೆ ಉಪಾಧ್ಯಕ್ಷ ಶಿವನಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ, ನಿರ್ದೇಶಕರಾದ ಶಂಕ್ರೆಪ್ಪ ಹೊಳಿ, ರಾಮನಗೌಡ ಪಾಟೀಲ, ಸುರೇಶ ಹುಲಿಕಟ್ಟಿ, ರಘು ಪಾಟೀಲ, ಭರಮಪ್ಪ ಶಿಗೆಹಳ್ಳಿ, ಬಾಳಪ್ಪ ಪೂಜಾರ, ಕಚೇರಿ ಅಧಿಕ್ಷಕ ಎಸ್.ಜಿ.ಹೆಗಡೆ ಹಾಗೂ ಇತರರು ಇದ್ದರು.</p>.<h2>‘ಕೇಂದ್ರ ಸರ್ಕಾರ ಎಂಎಸ್ಪಿ ಹೆಚ್ಚಿಸಲಿ‘</h2><p>‘ಕೇಂದ್ರ ಸರ್ಕಾರ 2019ರ ನಂತರ ಎಂಎಸ್ಪಿ ಹೆಚ್ಚಿಸಿಲ್ಲ. ಇದರಿಂದ ಸಕ್ಕರೆ ದರ ಕಾರ್ಖಾನೆಗಳಲ್ಲಿ ಏರಿಕೆ ಕಂಡಿಲ್ಲ. ಈ ದರದಲ್ಲಿ ಬರುವ ಹಣ ರೈತರ ಕಬ್ಬಿನ ಬಿಲ್ ಕಾರ್ಖಾನೆ ನಿರ್ವಹಣೆ ಕಷ್ಟವಾಗುತ್ತಿದೆ. ರೈತರು ಪೂರೈಸಿದ ಕಬ್ಬಿನ ಬಿಲ್ ಪಾವತಿ ವಿಳಂಬಕ್ಕೂ ಇದು ಕಾರಣವಾಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಸಕ್ಕರೆ ಎಂಎಸ್ಪಿಯನ್ನು ₹45 ಗೆ ಹೆಚ್ಚಿಸಬೇಕೆಂಬುದು ನಮ್ಮೆಲ್ಲ ಕಾರ್ಖಾನೆಗಳ ಆಗ್ರಹವಾಗಿದೆ’ ಎಂದು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>