‘ಶ್ರೀಶೈಲ ಹಾಗೂ ಮಹಾದೇವ ಅವರ ಮಧ್ಯೆ ಆಸ್ತಿಗೆ ಸಂಬಂಧಿಸಿ ಮೇಲಿಂದ ಮೇಲೆ ತಂಟೆ–ತಕರಾರುಗಳು ನಡೆಯುತ್ತಿದ್ದವು. ಮಂಗಳವಾರ ಕಬ್ಬಿನ ಗದ್ದೆಯಲ್ಲಿ ಮತ್ತೆ ಜಗಳ ಆರಂಭವಾಯಿತು. ಈ ವೇಳೆ ರಿವಾಲ್ವರ್ ಹೊರತೆಗೆದ ಶ್ರೀಶೈಲ ಗುಂಡು ಹಾರಿಸಿದರು. ಹತ್ತಿರದಲ್ಲೇ ಇದ್ದ ಕೆಲವರು ಅವರ ಕೈಯಿಂದ ರಿವಾಲ್ವರ್ ಕಿತ್ತುಕೊಳ್ಳಲು ಮುಂದಾದರು. ನೂಕಾಟದಲ್ಲಿ ಕೆಳಗೆ ಬಿದ್ದ ಶ್ರೀಶೈಲ ಅವರ ಮುಖ ಹಾಗೂ ಭುಜಕ್ಕೆ ಕಬ್ಬು ಕಟಾವು ಮಾಡಿದ ತುಂಡುಗಳು ಚುಚ್ಚಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.