ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದರರ ಕಲಹ: ಕೊಲೆಯಲ್ಲಿ ಅಂತ್ಯ

Last Updated 17 ಮೇ 2022, 3:56 IST
ಅಕ್ಷರ ಗಾತ್ರ

ಗೋಕಾಕ: ಬುದ್ಧಿ ಮಾತು ಹೇಳಿದ ಸಹೋದರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಗರದ ಕಿಲ್ಲೆಯ ಮನೆಯೊಂದರಲ್ಲಿ ನಡೆದಿದೆ. ಮುನಾಫ್ ರಫೀಕ್ ದೇಸಾಯಿ (24) ಕೊಲೆಯಾದವರು. ಮುನಾಫ್‌ ಅವರ ಹಿರಿಯ ಸಹೋದರ ರಮಜಾನ್ ರಫೀಕ್ ದೇಸಾಯಿ ಆರೋಪಿ.

ಕುಟುಂಬದ ಸದಸ್ಯರೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ‘ನನಗಿಂತ ಕಿರಿಯ ನೀನು ನನಗೇ ಬುದ್ಧಿ ಹೇಳುವೆಯಾ‘ ಎಂದು ಜಗಳ ತೆಗೆದಿದ್ದಾನೆ, ಇದು ವಿಕೋಪಕ್ಕೆ ಹೋದಾಗ ಇರಿದಿದ್ದಾನೆ ಎನ್ನಲಾಗಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT