ಈ ಚಲನಚಿತ್ರದ ಬಹುಪಾಲು ಭಾಗ ಕರ್ನಾಟಕದಲ್ಲೇ ಚಿತ್ರೀಕರಣವಾಗಿದೆ. ಆದರೆ, ಕೆಲವು ದೃಶ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಗಡಿ ಸಮಸ್ಯೆ ಕೆದಕುವ ಪ್ರಯತ್ನ ಮಾಡಲಾಗಿದೆ. ‘ಮರಾಠಿಯ ಗತ್ತನ್ನು ಬೆಳಗಾವಿಯಲ್ಲಿ ಅಲ್ಲದೇ ಇನ್ನೆಲ್ಲಿ ತೋರಿಸಬೇಕು’ ಎಂದು ನಾಯಕ ನಟನು ಬೆಳಗಾವಿ ಪೊಲೀಸ್ ಅಧಿಕಾರಿಗೆ ಗದರಿಸುವ ದೃಶ್ಯವಿದೆ. ಉದ್ದೇಶಪೂರ್ವಕವಾಗಿ ಇದೇ ದೃಶ್ಯವನ್ನು ಟ್ರೈಲರ್ನಲ್ಲಿ ಹರಿಬಿಡಲಾಗಿದೆ. ಇದು ಕನ್ನಡ ನಾಡಿಗೆ, ಭಾಷೆಗೆ ಮಾಡಿದ ಲೇವಡಿ ಎಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.