ಬೆಳಗಾವಿ: ಖಾನಾಪುರ ತಾಲ್ಲೂಕಿನ ಘೋಟಗಾಳಿ ಗ್ರಾಮದಲ್ಲಿ ಕೋವಿಡ್ನಿಂದ ತಂದೆ ಹಾಗೂ ತಾಯಿ ಕಳೆದುಕೊಂಡು ಅನಾಥರಾಗಿರುವ ಇಬ್ಬರು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ ಬುಧವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ಕೂಲಿ ಮಾಡುತ್ತಿದ್ದ ಘೋಟಗಾಳಿ ಗ್ರಾಮದ ಸಂಜಯ ವೆಂಕಪ್ಪ ಕರಲೆಕರ ಹಾಗೂ ಅವರ ಪತ್ನಿ ಶೀತಲ ವೆಂಕಪ್ಪ ಕರಲೆಕರ ಇತ್ತೀಚೆಗೆ ಕೋವಿಡ್ನಿಂದ ಮೃತಪಟ್ಟಿದ್ದರು.
ದಂಪತಿಯ ಸಾವಿನಿಂದ ಅನಾಥರಾಗಿರುವ ಅವರ ಮಕ್ಕಳಾದ ಸಂಜನಾ ಹಾಗೂ ಶುಭಂ ಅವರಿಗೆ ಸಚಿವರು ಧೈರ್ಯ ತುಂಬಿದರು. ‘ಕೋವಿಡ್ನಿಂದ ತಂದೆ- ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಪೋಷಣೆ ಹಾಗೂ ಶಿಕ್ಷಣಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ, ತಹಶೀಲ್ದಾರ್ ರೇಷ್ಮಾ ತಾಳಿಕೋಟಿ ಇದ್ದರು.