ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ‘ಕಾಮಗಾರಿ ಮಾಡಿಸಲು ಈಶ್ವರಪ್ಪ ಅವರೆ ಹೇಳಿದ್ದಾರೆ ಎಂದು ಪತಿ ತಿಳಿಸಿದ್ದರು. ಅವರು ಶೇ 40ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದೂ ಹೇಳಿದ್ದರು. ಹೀಗಾದರೆ ಸಾಲ ತೀರಿಸುವುದು ಹೇಗೆ ಎಂದು ಕೊರಗುತ್ತಿದ್ದರು. ನನ್ನ ಬಂಗಾರವನ್ನೂ ಒತ್ತೆ ಇಟ್ಟು ಕಾಮಗಾರಿ ಮಾಡಿಸಿದ್ದರು. ಹಣ ಬಾರದಿದ್ದರೆ ಏನು ಮಾಡುವುದು ಬಹಳ ನೊಂದಿದ್ದರು’ ಎಂದು ತಿಳಿಸಿದರು.