‘ಪ್ರಜಾವಾಣಿ’ಯಲ್ಲಿ ಡಿ. 26ರಂದು ‘ವೇತನ ತಾರತಮ್ಯ: ವೀರಣ್ಣ ದನಿ’ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಗಮನಿಸಿದ ಅವರು, ‘ಶಿಕ್ಷಕ ವೀರಣ್ಣ ಅವರೊಂದಿಗೆ ಮಾತನಾಡಿ ಸಂಪೂರ್ಣ ವಿವರ ಪಡೆದಿದ್ದೇನೆ. ಎಸ್ಡಿಎ ಬೆದರಿಕೆ ಹಾಕಿದ ಪ್ರಕರಣ ಕುರಿತು ವಿಚಾರಣೆ ಮಾಡಲು ಇಲಾಖೆಯ ಬೆಳಗಾವಿ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ಸೂಚಿಸಿದ್ದೇನೆ. ವೀರಣ್ಣ ಅವರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದಾರೆ.