‘ಎಣ್ಣೆಕಾಳುಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ನೈಸರ್ಗಿಕ ಕೃಷಿಗೆ ಆದ್ಯತೆ ಕೊಡಲಾಗಿದೆ. ಕೀಟನಾಶಕ ಸಿಂಪಡಣೆಗೆ ಡ್ರೋನ್ ಬಳಕೆಗೆ ಅವಕಾಶ ನೀಡಿ, ಸಿರಿಧಾನ್ಯಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲಾಗುತ್ತಿದೆ. ಸಿರಿಧಾನ್ಯಗಳ ವರ್ಷವಾಗಿ 2023 ಘೋಷಿಸಲು ತೀರ್ಮಾನಿಸಿರುವುದು ಪ್ರಗತಿಗೆ ಪೂರಕವಾಗಿದೆ. ಕೃಷಿಕರು, ಉದ್ಯಮಿದಾರರು, ಯುವಕರು ಹೀಗೆ ಎಲ್ಲ ವರ್ಗದವರ ಏಳಿಗೆಗೆ ಸಹಕಾರಿಯಾಗಿದೆ’ ಎಂದು ತಿಳಿಸಿದ್ದಾರೆ.