‘ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಹಾಗೂ ಹೈದರಾಲಿ ವಿಷಯವನ್ನು ಮಾತ್ರ ಬರಗೂರು ಅವರ ಸಮಿತಿ ಸೇರಿಸಿತ್ತು. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ ಅವರಂಥ ವೀರರ ಪಾಠಗಳನ್ನೂ ಈಗ ಸೇರಿಸಲಾಗಿದೆ. ಹಿಂದೆ 7ರಷ್ಟಿದ್ದ ಕುವೆಂಪು ಅವರ ಪಾಠಗಳ ಸಂಖ್ಯೆಯನ್ನು ಈಗ 10ಕ್ಕೆ ಏರಿಸಲಾಗಿದೆ. ಬಸವೇಶ್ವರರ ವಚನಗಳಲ್ಲಿ ಯಾವುದನ್ನೂ ಕೈಬಿಟ್ಟಿಲ್ಲ. ಮೇಲಾಗಿ, ಬರಗೂರು ಅವರು ಕೈಬಿಟ್ಟಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರ ಪಾಠಗಳನ್ನು ಹೊಸದಾಗಿ ಸೇರಿಸಲಾಗಿದೆ’ ಎಂದು ವಿವರಿಸಿದರು.