<p>ಮೂಡಲಗಿ: ‘ಸಮುದಾಯ ಭವನವನ್ನು ಸಾಮಾಜಿಕ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಂಡು ಪ್ರೀತಿ ಸದ್ಭಾವದಲ್ಲಿ ನಡೆಯಬೇಕು’ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.</p>.<p>ತಾಲ್ಲೂಕಿನ ಅರಭಾವಿ ಪಟ್ಟಣದ ಬಡಿಗೇರ ಓಣಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಸಮುದಾಯ ಭವನ ಉದ್ಘಾಟಿಸಿ, ಸಂಘಟಕರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸಮುದಾಯ ಭವನ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು ಭವನವನ್ನು ಮದುವೆ, ಉಪನಯನದದಂತ ಕಲ್ಯಾಣ ಕಾರ್ಯಗಳಿಗೆ ಬಳಿಸಿಕೊಳ್ಳಬೇಕು. ಸ್ವಚ್ಛತೆಯನ್ನು ಕಾಯ್ದುಕೊಂಡು ಜನರಿಗೆ ನಿರಂತರವಾಗಿ ಅನುಕೂಲವಾಗುವಂತೆ ಶಿಸ್ತನ್ನು ನಿರ್ವಹಿಸಿಕೊಂಡು ಇರಬೇಕು ಎಂದು ಸಲಹೆ ನೀಡಿದರು.</p>.<p>ಸಾರ್ವನಿಕರಿಗೆ ಆರ್ಥಿಕ ಸಹಾಯ ಮಾಡುವ ಶಕ್ತಿ ನನಗೆ ದೇವರು ಕೊಟ್ಟಿದ್ದು, ಕಳೆದ ಹಲವಾರು ವರ್ಷಗಳಿಂದ ತಮ್ಮ ಬಳಿಗೆ ಬರುವ ಗ್ರಾಮ, ಸಮುದಾಯ ಜನರ ಕಷ್ಟ, ನಷ್ಟಗಳಿಗೆ ಸದಾ ಸ್ಪಂದಿಸಿ ಕೊಂಡು ಬಂದಿರುವೆ. ಮಠ, ದೇವಸ್ಥಾನ, ಮಸೀದಿ ನಿರ್ಮಾಣ, ಶಾಲೆ, ಆಸ್ಪತ್ರೆ ನಿರ್ಮಾಣ, ಜಾತ್ರೆ, ಕನ್ನಡ ಉತ್ಸವ ಹೀಗೆ ಎಲ್ಲ ಆಚರಣೆಗಳಿಗೆ ಸ್ಪಂದಿಸಿರುವ ತೃಪ್ತಿ ಇದೆ. ಜನರ ಪ್ರೀತಿ, ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳುವದಿಲ್ಲ ಎಂದರು.</p>.<p>ಅರಭಾವಿ ಪಟ್ಟಣದ ಸ್ಥಳೀಯ ಪ್ರತಿನಿಧಿಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಪಟ್ಟಣದ ಸ್ಪಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.</p>.<p>ವೇದ ಮೂರ್ತಿ ಶಿವಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು, ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ಮುಖಂಡರಾದ ಶಂಕರ ಬಿಲಕುಂದಿ, ಮುತ್ತೆಪ್ಪ ಜಲ್ಲಿ, ನಿಂಗಪ್ಪ ಇಳಗೇರಿ, ಬಸವರಾಜ ಮಾಳೇದವರ, ಭೀಮಪ್ಪ ಹಳ್ಳೂರ, ಅಶೋಕ ಅಂಗಡಿ, ರಮೇಶ ಮಾದರ, ಅಂದಾನೆಪ್ಪ ಕಡಗದ, ಶಂಕರ ಕಂಬಾರ, ಡಾ. ಎಸ್.ಎಸ್. ಕಲ್ಲೊಳಿ, ಸಂಜು ಮಾದರ, ವಿಶ್ವನಾಥ ಹೊಸಮನಿ, ಸತ್ತೆಪ್ಪ ಬಡಾಯಿ, ಸುನಿಲ ಜಮಖಂಡಿ, ಮಹಾದೇವ ಗುಡಿತೋಟ, ಚಂದ್ರಪ್ಪ ಘೀವಾರಿ, ಕಾಡಯ್ಯ ದಡ್ಡಿ, ರಾಯಪ್ಪ ಕಡ್ಡಿ, ಸಿದ್ದಪ್ಪ ಬಡಿಗೇರ, ರಿಯಾಜ ಯಾದವಾಡ, ಸಾತಪ್ಪ ಜೈನ, ಸದಾಶಿವ ಬಬಲೇಶ್ವರ, ಪರಶುರಾಮ ಸನ್ನಾಪಣಿ, ಪಟ್ಟಣ ಪಂಚಾಯತ ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು ಸೇರಿ ದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-21-1225723284</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡಲಗಿ: ‘ಸಮುದಾಯ ಭವನವನ್ನು ಸಾಮಾಜಿಕ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಂಡು ಪ್ರೀತಿ ಸದ್ಭಾವದಲ್ಲಿ ನಡೆಯಬೇಕು’ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.</p>.<p>ತಾಲ್ಲೂಕಿನ ಅರಭಾವಿ ಪಟ್ಟಣದ ಬಡಿಗೇರ ಓಣಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಸಮುದಾಯ ಭವನ ಉದ್ಘಾಟಿಸಿ, ಸಂಘಟಕರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸಮುದಾಯ ಭವನ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು ಭವನವನ್ನು ಮದುವೆ, ಉಪನಯನದದಂತ ಕಲ್ಯಾಣ ಕಾರ್ಯಗಳಿಗೆ ಬಳಿಸಿಕೊಳ್ಳಬೇಕು. ಸ್ವಚ್ಛತೆಯನ್ನು ಕಾಯ್ದುಕೊಂಡು ಜನರಿಗೆ ನಿರಂತರವಾಗಿ ಅನುಕೂಲವಾಗುವಂತೆ ಶಿಸ್ತನ್ನು ನಿರ್ವಹಿಸಿಕೊಂಡು ಇರಬೇಕು ಎಂದು ಸಲಹೆ ನೀಡಿದರು.</p>.<p>ಸಾರ್ವನಿಕರಿಗೆ ಆರ್ಥಿಕ ಸಹಾಯ ಮಾಡುವ ಶಕ್ತಿ ನನಗೆ ದೇವರು ಕೊಟ್ಟಿದ್ದು, ಕಳೆದ ಹಲವಾರು ವರ್ಷಗಳಿಂದ ತಮ್ಮ ಬಳಿಗೆ ಬರುವ ಗ್ರಾಮ, ಸಮುದಾಯ ಜನರ ಕಷ್ಟ, ನಷ್ಟಗಳಿಗೆ ಸದಾ ಸ್ಪಂದಿಸಿ ಕೊಂಡು ಬಂದಿರುವೆ. ಮಠ, ದೇವಸ್ಥಾನ, ಮಸೀದಿ ನಿರ್ಮಾಣ, ಶಾಲೆ, ಆಸ್ಪತ್ರೆ ನಿರ್ಮಾಣ, ಜಾತ್ರೆ, ಕನ್ನಡ ಉತ್ಸವ ಹೀಗೆ ಎಲ್ಲ ಆಚರಣೆಗಳಿಗೆ ಸ್ಪಂದಿಸಿರುವ ತೃಪ್ತಿ ಇದೆ. ಜನರ ಪ್ರೀತಿ, ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳುವದಿಲ್ಲ ಎಂದರು.</p>.<p>ಅರಭಾವಿ ಪಟ್ಟಣದ ಸ್ಥಳೀಯ ಪ್ರತಿನಿಧಿಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಪಟ್ಟಣದ ಸ್ಪಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.</p>.<p>ವೇದ ಮೂರ್ತಿ ಶಿವಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು, ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ಮುಖಂಡರಾದ ಶಂಕರ ಬಿಲಕುಂದಿ, ಮುತ್ತೆಪ್ಪ ಜಲ್ಲಿ, ನಿಂಗಪ್ಪ ಇಳಗೇರಿ, ಬಸವರಾಜ ಮಾಳೇದವರ, ಭೀಮಪ್ಪ ಹಳ್ಳೂರ, ಅಶೋಕ ಅಂಗಡಿ, ರಮೇಶ ಮಾದರ, ಅಂದಾನೆಪ್ಪ ಕಡಗದ, ಶಂಕರ ಕಂಬಾರ, ಡಾ. ಎಸ್.ಎಸ್. ಕಲ್ಲೊಳಿ, ಸಂಜು ಮಾದರ, ವಿಶ್ವನಾಥ ಹೊಸಮನಿ, ಸತ್ತೆಪ್ಪ ಬಡಾಯಿ, ಸುನಿಲ ಜಮಖಂಡಿ, ಮಹಾದೇವ ಗುಡಿತೋಟ, ಚಂದ್ರಪ್ಪ ಘೀವಾರಿ, ಕಾಡಯ್ಯ ದಡ್ಡಿ, ರಾಯಪ್ಪ ಕಡ್ಡಿ, ಸಿದ್ದಪ್ಪ ಬಡಿಗೇರ, ರಿಯಾಜ ಯಾದವಾಡ, ಸಾತಪ್ಪ ಜೈನ, ಸದಾಶಿವ ಬಬಲೇಶ್ವರ, ಪರಶುರಾಮ ಸನ್ನಾಪಣಿ, ಪಟ್ಟಣ ಪಂಚಾಯತ ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು ಸೇರಿ ದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-21-1225723284</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>