ಮೂಡಲಗಿ: ಆಷಾಢದಲ್ಲಿ ಪ್ರಾರಂಭಗೊಳ್ಳುವ ಗುಳ್ಳವ್ವನ ಹಬ್ಬವನ್ನ ಉತ್ತರ ಕರ್ನಾಟದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ಒಂದು ಕಾಲದಲ್ಲಿ ಕುಂಬಾರಣ್ಣನ ಮನೆಗೆ ತೆರಳಿ ತಿರಗಣಿಯನ್ನು ತಿರುಗಿಸಿದ ನಂತರ ಗುಳ್ಳವ್ವನ ಮೂರ್ತಿ ಕೈಗಿಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಇಲ್ಲಿಯ ಶಿವಾನಂದ ಕುಂಬಾರ ಮೂರ್ತಿಗಳನ್ನು ಬೈಕ್ನಲ್ಲಿ ತಂದು ಮನೆಗಳಿಗೆ ತಲುಪಿಸುವ ಮೂಲಕ ಗಮನಸೆಳೆದರು.