ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ: ಇಬ್ಬರಿಗೆ 10 ವರ್ಷ ಶಿಕ್ಷೆ

Last Updated 28 ಮೇ 2021, 15:59 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಆಜಾದ್‌ ನಗರ ಮುಖ್ಯರಸ್ತೆಯ ಕ್ರಾಸ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಆಟೊರಿಕ್ಷಾ ಮಾಲೀಕನನ್ನು ಕೊಲೆ ಮಾಡಿದ್ದ ಇಬ್ಬರಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ ₹10ಸಾವಿರ ದಂಡ ವಿಧಿಸಿ ಇಲ್ಲಿನ 10ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ಜಮೀರ ಮಕಾನದಾರ ಹಾಗೂ ಮಹ್ಮದ್ ಅನ್ವರ್ ಶಿಕ್ಷೆಗೆ ಗುರಿಯಾದವರು.

‘2015ರ ಸೆ.24ರಂದು ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿತ್ತು. ಇವರಿಬ್ಬರೂ ಸೇರಿ ಮಹಮ್ಮದರಸೂಲ ಬಾಬಾಸಾಬ ಶೇಖ ಎನ್ನುವವರನ್ನು ಕೊಲೆ ಮಾಡಿದ್ದರು. ಮಹಮ್ಮದರಸೂಲ ಅವರಿಂದ ಜಮೀರ ಆಟೊರಿಕ್ಷಾ ಬಾಡಿಗೆಗೆ ಪಡೆದಿದ್ದ. ಜಾಂಬೋಟಿ ಕಡೆಯಿಂದ ಬರುವಾಗ ಅಪಘಾತ ಮಾಡಿ ನಷ್ಟ ಉಂಟು ಮಾಡಿದ್ದ. ದುರಸ್ತಿ ಮಾಡಿಸಿಕೊಡುವಂತೆ ಕೇಳಿದ್ದರು. ಇದರಿಂದ ಸಿಟ್ಟಾದ ಜಮೀರ ತನ್ನ ಸ್ನೇಹಿತ ಮಹ್ಮದ್ ಜೊತೆ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಬಗ್ಗೆ ಮೃತರ ಪತ್ನಿ ಮಾಳಮಾರುತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ವೆಂಕಟೇಶ ರಾಮಕೃಷ್ಣ ರಾವ್‌ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ’ ಎಂದು ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಸರ್ಕಾರಿ ಅಭಿಯೋಜಕ ಆರ್.ಎ. ಬಾರಾವಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT