22ರಂದು ‘ರಾಷ್ಟ್ರದ ಬೆಳವಣಿಗೆಗೆ ಭ್ರಷ್ಟಾಚಾರದ ತೊಡಕು’ ಕುರಿತ ಕಾರ್ಯಕ್ರಮ ನಡೆಯಲಿದೆ. ಕಡೋಲಿಯ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಪ್ರಾಧ್ಯಾಪಕ ಟಿ. ಪ್ರಸನ್ನ ವಿಷಯ ಮಂಡಿಸುವರು. ವಕೀಲ ಎಂ.ಬಿ. ಝಿರಲಿ ಅಧ್ಯಕ್ಷತೆ ವಹಿಸುವರು. 23ರಂದು ಕವಿಗೋಷ್ಠಿ ನಡೆಯಲಿದೆ. ಸಾಹಿತಿ ಎಲ್.ಎಸ್. ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಭುವನೇಶ್ವರಿ ಹಿರೇಮಠ, ನದೀಮ ಸನದಿ, ನಾಗೇಶ ನಾಯಕ, ಜಯಶ್ರೀ ಅಬ್ಬಿಗೇರಿ, ಸುನೀತಾ ದೇಸಾಯಿ, ದೀಪಿಕಾ ಚಾಟೆ, ರಾಜೇಶ್ವರಿ ಹಿರೇಮಠ, ಸಿದ್ದರಾಮ ತಳವಾರ, ಪ್ರೊ.ಜಿ.ಕೆ. ಕುಲಕರ್ಣಿ, ಡಾ.ಹೇಮಾ ಸೊನೊಳ್ಳಿ, ಮಧುಕರ ಗುಂಡೇನಟ್ಟಿ ಭಾಗವಹಿಸುವರು ಎಂದು ಮಾಹಿತಿ ನೀಡಿದ್ದಾರೆ.