ಬೆಳಗಾವಿ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ನೇಕಾರರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಮಾಜದ ಮುಖಂಡರು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಜಿ.ರಮೇಶ್, ಮುಖಂಡರಾದ ಶಂಕರ್ ಬುಚಡಿ, ಸುರೇಶ್ ಕಿತ್ತೂರ, ಟಿ. ರಾಜೇಶ್, ಗಜಾನನ ಗುಂಜೇರಿ, ಶಂಕ್ರಣ್ಣ ಮುರುಡಿ, ಭುಜಂಗ್ ಭಂಡಾರಿ, ಕೃಷ್ಣ ಹೊಂಡಿ ಇದ್ದರು.