‘ರಾಷ್ಟ್ರೀಯ ಹೆದ್ದಾರಿಯ ನಿಗದಿಪಡಿಸಿದ್ದ ಅಳತೆಗಿಂತ ಹೆಚ್ಚು ಖಾನಾಪುರ ತಾಲ್ಲೂಕಿನ ಇದ್ದಲಹೊಂಡ, ಗಣಿಬೈಲ್, ನಿಟ್ಟೂರ, ಹತ್ತರಗುಂಜಿ, ಜಾಡಅಂಕಲಿ, ಕೇಮೆವಾಡಿ ಗ್ರಾಮಗಳ ರೈತರ ಜಮೀನನ್ನು ತೆಗೆದುಕೊಂಡಿದ್ದಾರೆ. ಅದಲ್ಲದೇ, ಆಯಾ ರೈತರಿಗೆ ಮಾಹಿತಿ ನೀಡದೆ ಕಾಮಗಾರಿ ಆರಂಭಿಸಲಾಗಿದೆ’ ಎಂದು ಅಧ್ಯಕ್ಷ ಚೂನಪ್ಪಾ ಪೂಜೇರಿ ಆರೋಪಿಸಿದರು.