<p><strong>ನಿಪ್ಪಾಣಿ:</strong> ಶ್ರೀಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಜೊಲ್ಲೆ ಗ್ರುಪ್ ವತಿಯಿಂದ ಆಯೋಜಿಸಲಾದ ಭವ್ಯ ಕೃಷಿ ಉತ್ಸವದಲ್ಲಿ ಅಪ್ಪಟ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು.</p>.<p>ಅದರಲ್ಲೂ ಯುವಕರ ಶಕ್ತಿ, ಧೈರ್ಯ ಮತ್ತು ಸಾಮರ್ಥ್ಯವನ್ನು ತೋರಿಸುವ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಹಾಗೂ ಗುಂಡುಕಲ್ಲು ಎತ್ತುವ ಸ್ಪರ್ಧೆ ಪ್ರೇಕ್ಷಕರಲ್ಲಿ ಭಾರೀ ಉತ್ಸಾಹ ಮೂಡಿಸಿತು.</p>.<p>ಕ್ವಿಂಟಲ್ ತೂಕದ ಭಾರಿ ಕಲ್ಲುಗಳನ್ನು ಯುವ ಪೈಲವಾನರು ಕ್ಷಣಾರ್ಧದಲ್ಲಿ ಹೆಗಲ ಮೇಲೆ ಎತ್ತಿ ತೋರಿಸಿದ ದೃಶ್ಯ ಸಾವಿರಾರು ಜನರನ್ನು ರೋಮಾಂಚನಗೊಳಿಸಿತು. ನಿಧಾನವಾಗಿ ನಶಿಸಿ ಹೋಗುತ್ತಿರುವ ಇಂತಹ ಪಾರಂಪರಿಕ ಗ್ರಾಮೀಣ ಕ್ರೀಡೆಗಳನ್ನು ಮತ್ತೆ ಜೀವಂತಗೊಳಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.</p>.<p>ಗುಂಡುಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಬಿಲ್ಲೂರ ಗ್ರಾಮದ ಶೇಖಪ್ಪ ಬಸಪ್ಪ ಯಲವಾರ ಪ್ರಥಮ ಸ್ಥಾನ ಪಡೆದು ₹15 ಸಾವಿರ ಬಹುಮಾನ ಪಡೆದರು. ಶೆಗುಣಸಿಯ ಅಮೃತ ಗೌಡನವರ ದ್ವಿತೀಯ ಸ್ಥಾನದೊಂದಿಗೆ ₹12 ಸಾವಿರ ಹಾಗೂ ಸಂಗಣ್ಣ ಗೌಡನವರ ತೃತೀಯ ಸ್ಥಾನದೊಂದಿಗೆ ₹10 ಸಾವಿರ ಬಹುಮಾನ ಪಡೆದರು.</p>.<p>ಇದೇ ವೇಳೆ ನಡೆದ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಆಸಂಗಿ ಗ್ರಾಮದ ಅಫಜಲ್ ಮುಜಾವರ ಕ್ವಿಂಟಲ್ ತೂಕದ ಕಲ್ಲು ಎತ್ತಿ ಪ್ರಥಮ ಸ್ಥಾನ ಪಡೆದು ₹15 ಸಾವಿರ. ಯಲ್ಲಮ್ಮ ಸವದತ್ತಿಯ ಸಬೀಬ ಪೈಲವಾನ್ ದ್ವಿತೀಯ ಸ್ಥಾನದೊಂದಿಗೆ ₹12 ಸಾವಿರ, ಬಿಸನಾಳ ಗ್ರಾಮದ ಕಿರಣ ಅರಕೆ ತೃತೀಯ ಸ್ಥಾನದೊಂದಿಗೆ ₹10 ಬಹುಮಾನ ಪಡೆದರು.</p>.<p>ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಕಾರ್ಖಾನೆ ಅಧ್ಯಕ್ಷ ಮಲಗೌಡ ಪಾಟೀಲ, ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸೇರಿದಂತೆ ಕಾರ್ಖಾನೆ ಆಡಳಿತ ಮಂಡಳಿ ಸಂಚಾಲಕರು ಹಾಗೂ ಅನೇಕ ಗಣ್ಯರು ಇದ್ದರು.</p>.<p><strong>ಜಾನಪದ ಹಾಡುಗಳು:</strong> ಕೃಷಿ ಉತ್ಸವದಲ್ಲಿ ರೈತರು ಮತ್ತು ಸಾರ್ವಜನಿಕರ ಮನರಂಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಜಾನಪದ ಹಾಡಿನ ಸರದಾರ ಶಬ್ಬೀರ ಡಾಂಗೆ ಅವರ ಗ್ರಾಮೀಣ ಭಾಗದ ಬದುಕಿನ ಜಾನಪದ ಹಾಡುಗಳಿಗೆ ಜನ ಕುಣಿದು ಕುಪ್ಪಳಿಸಿದರು. ಎರಡು ಗಂಟೆಗಳ ಕಾಲ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಡಾಂಗೆ ಹಾಡುಗಳಿಗೆ ಜನ ಮನಸೋತು ಹೋದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿಪ್ಪಾಣಿ:</strong> ಶ್ರೀಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಜೊಲ್ಲೆ ಗ್ರುಪ್ ವತಿಯಿಂದ ಆಯೋಜಿಸಲಾದ ಭವ್ಯ ಕೃಷಿ ಉತ್ಸವದಲ್ಲಿ ಅಪ್ಪಟ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು.</p>.<p>ಅದರಲ್ಲೂ ಯುವಕರ ಶಕ್ತಿ, ಧೈರ್ಯ ಮತ್ತು ಸಾಮರ್ಥ್ಯವನ್ನು ತೋರಿಸುವ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಹಾಗೂ ಗುಂಡುಕಲ್ಲು ಎತ್ತುವ ಸ್ಪರ್ಧೆ ಪ್ರೇಕ್ಷಕರಲ್ಲಿ ಭಾರೀ ಉತ್ಸಾಹ ಮೂಡಿಸಿತು.</p>.<p>ಕ್ವಿಂಟಲ್ ತೂಕದ ಭಾರಿ ಕಲ್ಲುಗಳನ್ನು ಯುವ ಪೈಲವಾನರು ಕ್ಷಣಾರ್ಧದಲ್ಲಿ ಹೆಗಲ ಮೇಲೆ ಎತ್ತಿ ತೋರಿಸಿದ ದೃಶ್ಯ ಸಾವಿರಾರು ಜನರನ್ನು ರೋಮಾಂಚನಗೊಳಿಸಿತು. ನಿಧಾನವಾಗಿ ನಶಿಸಿ ಹೋಗುತ್ತಿರುವ ಇಂತಹ ಪಾರಂಪರಿಕ ಗ್ರಾಮೀಣ ಕ್ರೀಡೆಗಳನ್ನು ಮತ್ತೆ ಜೀವಂತಗೊಳಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.</p>.<p>ಗುಂಡುಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಬಿಲ್ಲೂರ ಗ್ರಾಮದ ಶೇಖಪ್ಪ ಬಸಪ್ಪ ಯಲವಾರ ಪ್ರಥಮ ಸ್ಥಾನ ಪಡೆದು ₹15 ಸಾವಿರ ಬಹುಮಾನ ಪಡೆದರು. ಶೆಗುಣಸಿಯ ಅಮೃತ ಗೌಡನವರ ದ್ವಿತೀಯ ಸ್ಥಾನದೊಂದಿಗೆ ₹12 ಸಾವಿರ ಹಾಗೂ ಸಂಗಣ್ಣ ಗೌಡನವರ ತೃತೀಯ ಸ್ಥಾನದೊಂದಿಗೆ ₹10 ಸಾವಿರ ಬಹುಮಾನ ಪಡೆದರು.</p>.<p>ಇದೇ ವೇಳೆ ನಡೆದ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಆಸಂಗಿ ಗ್ರಾಮದ ಅಫಜಲ್ ಮುಜಾವರ ಕ್ವಿಂಟಲ್ ತೂಕದ ಕಲ್ಲು ಎತ್ತಿ ಪ್ರಥಮ ಸ್ಥಾನ ಪಡೆದು ₹15 ಸಾವಿರ. ಯಲ್ಲಮ್ಮ ಸವದತ್ತಿಯ ಸಬೀಬ ಪೈಲವಾನ್ ದ್ವಿತೀಯ ಸ್ಥಾನದೊಂದಿಗೆ ₹12 ಸಾವಿರ, ಬಿಸನಾಳ ಗ್ರಾಮದ ಕಿರಣ ಅರಕೆ ತೃತೀಯ ಸ್ಥಾನದೊಂದಿಗೆ ₹10 ಬಹುಮಾನ ಪಡೆದರು.</p>.<p>ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಕಾರ್ಖಾನೆ ಅಧ್ಯಕ್ಷ ಮಲಗೌಡ ಪಾಟೀಲ, ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸೇರಿದಂತೆ ಕಾರ್ಖಾನೆ ಆಡಳಿತ ಮಂಡಳಿ ಸಂಚಾಲಕರು ಹಾಗೂ ಅನೇಕ ಗಣ್ಯರು ಇದ್ದರು.</p>.<p><strong>ಜಾನಪದ ಹಾಡುಗಳು:</strong> ಕೃಷಿ ಉತ್ಸವದಲ್ಲಿ ರೈತರು ಮತ್ತು ಸಾರ್ವಜನಿಕರ ಮನರಂಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಜಾನಪದ ಹಾಡಿನ ಸರದಾರ ಶಬ್ಬೀರ ಡಾಂಗೆ ಅವರ ಗ್ರಾಮೀಣ ಭಾಗದ ಬದುಕಿನ ಜಾನಪದ ಹಾಡುಗಳಿಗೆ ಜನ ಕುಣಿದು ಕುಪ್ಪಳಿಸಿದರು. ಎರಡು ಗಂಟೆಗಳ ಕಾಲ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಡಾಂಗೆ ಹಾಡುಗಳಿಗೆ ಜನ ಮನಸೋತು ಹೋದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>