ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಭೆ ನಡೆಸಿದಾಗ ಕಾರ್ಖಾನೆಗಳು ₹ 1,100 ಕೋಟಿ ರೈತರ ಬಿಲ್ ಉಳಿಸಿಕೊಂಡಿದ್ದವು. ಅದರಲ್ಲಿ ಈಗ ₹ 62 ಕೋಟಿ ಪಾವತಿ ಮಾಡಲಾಗಿದ್ದು, ₹ 1,038 ಕೋಟಿ ಬಾಕಿ ಉಳಿದಿದೆ’ ಎಂದು ನುಡಿದರು.