‘ಜಿಲ್ಲಾ ಮಟ್ಟದ 23 ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಿದ ಹಿಂದಿನ ಸರ್ಕಾರದ ಕ್ರಮವು ಅತ್ಯಂತ ಅಸಮಂಜಸ ಹಾಗೂ ಜನ ವಿರೋಧಿ ಹೆಜ್ಜೆಯಾಗಿದೆ. ರಾಜ್ಯ ಮಟ್ಟದ ಸಚಿವಾಲಯ ಆಗಬೇಕಾದುದು ಜಿಲ್ಲಾಡಳಿತ ಭವನ ಎಂಬ ಹಣೆಪಟ್ಟಿ ಹೊತ್ತಂತಾಗಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಬಹುಮಹಡಿ ಕಟ್ಟಡವೊಂದನ್ನು ಕಟ್ಟಿ ಎಲ್ಲ ಜಿಲ್ಲಾ ಮಟ್ಟದ ಕಚೇರಿಗಳನ್ನು ಅಲ್ಲಿಯೇ ಸ್ಥಾಪಿಸಬಹುದು. ಉತ್ತರ ಕರ್ನಾಟಕದ 13 ಜಿಲ್ಲೆಗಳ ಜನತೆಯ ಅನುಕೂಲದ ದೃಷ್ಟಿಯಿಂದ ರಾಜ್ಯದ ಮಹತ್ವದ ಇಲಾಖೆಗಳನ್ನು, ಗಡಿಗೆ ಸಂಬಂಧಿಸಿದ ಪ್ರಾಧಿಕಾರಗಳನ್ನು ಮತ್ತು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕರ ನಿರ್ದೇಶಕರ ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು’ ಎಂದು ಕೋರಿದ್ದಾರೆ.