ಗೋಕಾಕ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಲೋಳಸೂರು ಸಮೀಪ ಪಾದಚಾರಿಯೊಬ್ಬರಿಗೆ ಭಾನುವಾರ ಕ್ರೂಸರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗೋಕಾಕ ತಾಲ್ಲೂಕಿನ ಅನಂತಪುರ ನಿವಾಸಿ ರಮೇಶ ಬಾಳಾಸಾಬ ಪಾಟೀಲ (65) ಮೃತಪಟ್ಟವರು.
ಲೋಳಸೂರ ಹೊರವಲಯದಲ್ಲಿ ರಸ್ತೆ ಬದಿಗೆ ಬೈಕ್ ನಿಲ್ಲಿಸಿದ ರಮೇಶ ಅವರು, ರಸ್ತೆಯ ಇನ್ನೊಂದು ಬದಿಗೆ ಮೂತ್ರ ವಿಸರ್ಜನೆಗೆ ತೆರಳಿದ್ದರು. ರಸ್ತೆ ದಾಟಿ ವಾಪಸ್ಬರುವಾಗ ವೇಗವಾಗಿ ಬಂದ ಕ್ರೂಸರ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ರಮೇಶ ಅವರು ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.