ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅಂಚೆ ಇಲಾಖೆಯಿಂದ ಪಿಂಚಣಿ ಅದಾಲತ್

Last Updated 8 ಜುಲೈ 2021, 10:53 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೇಂದ್ರ ಅಂಚೆ ಕಚೇರಿಯಲ್ಲಿ ಬುಧವಾರ ನಡೆದ ಪಿಂಚಣಿ ಅದಾಲತ್‌ನಲ್ಲಿ ಇಲಾಖೆಯ ನಿವೃತ್ತ ನೌಕರರ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿದರು.

ಸೂಪರಿಂಟೆಂಡೆಂಟ್ ಎಚ್‌.ಬಿ. ಹಸಬಿ ಅಧ್ಯಕ್ಷತೆ ವಹಿಸಿದ್ದರು. ಪಿಂಚಣಿದಾರರಿಗೆ ಎಟಿಎಂ ಕಾರ್ಡ್‌ ನೀಡುವುದು, ಆರೋಗ್ಯ ಸರಿ ಇಲ್ಲದವರು ಅಥವಾ ಅಶಕ್ತರು ಅಂಚೆ ಕಚೇರಿಗೆ ಹೋಗಿ ಪಿಂಚಣಿ ಪಡೆಯಲು ಆಗದಿದ್ದಲ್ಲಿ ಮನೆಗಳಿಗೇ ಹೋಗಿ ನೀಡುವಂತೆ ಮಾಡಿದ ಮನವಿಗೆ ಒಪ್ಪಿಗೆ ನೀಡಲಾಯಿತು. ಪೋಸ್ಟ್‌ಮನ್‌ಗಳ ಮೂಲಕ ಈ ಕಾರ್ಯನಿರ್ವಹಣೆ ಮಾಡಿಸಲಾಗುವುದು ಎಂದು ತಿಳಿಸಲಾಯಿತು.

ಎನ್.ಡಿ. ಕುಲಕರ್ಣಿ, ಪಿ.ಆರ್. ಅಮಾಸಿ, ಜಿ.ಜಿ. ದೇಶಪಾಂಡೆ, ಪರಶುರಾಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT