ಬುಧವಾರ, ಮಾರ್ಚ್ 22, 2023
19 °C

ಬೆಳಗಾವಿ: ಅಂಚೆ ಇಲಾಖೆಯಿಂದ ಪಿಂಚಣಿ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಕೇಂದ್ರ ಅಂಚೆ ಕಚೇರಿಯಲ್ಲಿ ಬುಧವಾರ ನಡೆದ ಪಿಂಚಣಿ ಅದಾಲತ್‌ನಲ್ಲಿ ಇಲಾಖೆಯ ನಿವೃತ್ತ ನೌಕರರ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿದರು.

ಸೂಪರಿಂಟೆಂಡೆಂಟ್ ಎಚ್‌.ಬಿ. ಹಸಬಿ ಅಧ್ಯಕ್ಷತೆ ವಹಿಸಿದ್ದರು. ಪಿಂಚಣಿದಾರರಿಗೆ ಎಟಿಎಂ ಕಾರ್ಡ್‌ ನೀಡುವುದು, ಆರೋಗ್ಯ ಸರಿ ಇಲ್ಲದವರು ಅಥವಾ ಅಶಕ್ತರು ಅಂಚೆ ಕಚೇರಿಗೆ ಹೋಗಿ ಪಿಂಚಣಿ ಪಡೆಯಲು ಆಗದಿದ್ದಲ್ಲಿ ಮನೆಗಳಿಗೇ ಹೋಗಿ ನೀಡುವಂತೆ ಮಾಡಿದ ಮನವಿಗೆ ಒಪ್ಪಿಗೆ ನೀಡಲಾಯಿತು. ಪೋಸ್ಟ್‌ಮನ್‌ಗಳ ಮೂಲಕ ಈ ಕಾರ್ಯನಿರ್ವಹಣೆ ಮಾಡಿಸಲಾಗುವುದು ಎಂದು ತಿಳಿಸಲಾಯಿತು.

ಎನ್.ಡಿ. ಕುಲಕರ್ಣಿ, ಪಿ.ಆರ್. ಅಮಾಸಿ, ಜಿ.ಜಿ. ದೇಶಪಾಂಡೆ, ಪರಶುರಾಮ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು