ಹಿನ್ನೆಲೆ: ಬಳ್ಳಾರಿಯ ಹೊಸಪೇಟೆಯಿಂದ 2007 ಜ. 5ರಂದು ಖಾಸಗಿ ಬಸ್ನಲ್ಲಿ ನಗರಕ್ಕೆ ಬರುತ್ತಿದ್ದಾಗ ಗೊರಗುಂಟೆಪಾಳ್ಯದಲ್ಲಿ ಬಿಲಾಲ್ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಎ.ಕೆ–47 ರೈಫಲ್, 200 ಸುತ್ತು ಜೀವಂತ ಗುಂಡುಗಳು, ಉಗ್ರ ಸಂಘಟನೆಗೆ ಸೇರಿದ ಪುಸ್ತಕ, ವಾರ ಪತ್ರಿಕೆಗಳು, ಬೆಂಗಳೂರು ನಕ್ಷೆ, 5 ಸಿಮ್ ಕಾರ್ಡ್, ₹ 38 ಸಾವಿರ ನಗದು ವಶಕ್ಕೆ ಪಡೆದಿದ್ದರು. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ 2016 ಅ.6ರಂದು ಬಿಲಾಲ್ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.