‘ಪ್ರಯಾಣ, ಸರಕು ಸಾಗಣೆ ಸೇವೆ, ನೀರು ಸರಬರಾಜು, ಸಾರ್ವಜನಿಕ ನೈರ್ಮಲ್ಯ, ಆಸ್ಪತ್ರೆ ಅಥವಾ ವಿತರಣೆ ಸೇವೆಗಳು, ವಿಮೆ, ಬ್ಯಾಂಕಿಂಗ್–ಹಣಕಾಸು ಸಂಸ್ಥೆಗಳು, ಶಿಕ್ಷಣ, ವಸತಿ ಹಾಗೂ ರಿಯಲ್ಎಸ್ಟೇಟ್ ಸೇವೆಗಳ ಸಂಬಂಧ ವಿವಾದಗಳನ್ನು ಮಾತ್ರ ಕಾಯಂ ಜನತಾ ನ್ಯಾಯಾಲಯದಲ್ಲಿ ಬಗೆಹರಿಸಲಾಗುವುದು. ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು. ಇಲ್ಲಿ ಆದ ತೀರ್ಪಿಗೆ ಸಂಬಂಧಿಸಿ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.