‘ಈ ವ್ಯಕ್ತಿ ಶ್ರೀರಾಮ ಸೇನೆ ಸಂಘಟನೆ ಸದಸ್ಯನಲ್ಲ, ಪದಾಧಿಕಾರಿಯೂ ಅಲ್ಲ. ಲಿಂಗಸಗೂರಿನ ಸಂಘಟನೆಯ ಕಾರ್ಯಕರ್ತರೊಂದಿಗೆ ಅವರು ಬಂದಿಲ್ಲ. ಹಿಂದೂ ಪರ ಕಾರ್ಯಕರ್ತ ಸಾವಿಗೀಡಾದನೆಂದು ನೊಂದು ಭಾವನಾತ್ಮಕವಾಗಿ ಹೀಗೆ ಮಾಡಿಕೊಂಡಿದ್ದಾರೋ, ವೈಯಕ್ತಿಕ ಸಮಸ್ಯೆ ಕಾರಣವೋ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಖಾಸಗಿ ಬ್ಯಾಂಕಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿರುವುದಾಗಿ, ಯಾರದೋ ಮದುವೆ ಕಾರ್ಯಕ್ರಮವಿದೆ ಎಂದು ರಜೆ ಪಡೆದುಕೊಂಡು ಇಲ್ಲಿಗೆ ಬಂದಿರುವುದು ತಿಳಿದುಬಂದಿದೆ. ಗುಣಮುಖರಾದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.