ಈ ಬಾರಿ ಭರತ ಹುಣ್ಣಿಮೆಯಂದು ಚಂದ್ರಗ್ರಹಣ ಇದ್ದುದರಿಂದ ಜಾತ್ರೆಯನ್ನು ಒಂದು ದಿನ ಮುಂದೂಡಲಾಗಿತ್ತು. ಮೂರು ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವದಲ್ಲಿ ಭಕ್ತರು ಸಹಕಾರ ನೀಡಬೇಕು ಎಂದು ಧರ್ಮದರ್ಶಿ ಗಣಪತಿ ಕಾಮತ್ ಸಿರಿವಂತೆ ಮನವಿ ಮಾಡಿದ್ದಾರೆ. ಸಮಿತಿ ಅಧ್ಯಕ್ಷ ಕೆ.ವಿ. ನಾಗೇಶ್, ಕಾರ್ಯದರ್ಶಿ ಟಿ.ಸುರೇಶ್, ಖಜಾಂಚಿ ಎಚ್. ರವಿ ಉಪಸ್ಥಿತರಿದ್ದರು.