ಬೆಳಗಾವಿ: ‘ಎಲ್ಲ ಸರ್ಕಾರಿ ನೌಕರಿಗಳಿಗಿಂತ ಪೊಲೀಸ್ ಆಗುವುದು ದೊಡ್ಡ ಸವಾಲು. ಸಮಾಜದ ರಕ್ಷಣೆಗಾಗಿಯೇ ಪಣ ತೊಟ್ಟು ನಿಲ್ಲುವುದಕ್ಕೆ ಗಟ್ಟಿ ಹೃದಯ ಬೇಕಾಗುತ್ತದೆ. ಹಲವು ಸಂದರ್ಭಗಳಲ್ಲಿ ಮನೆ, ಕುಟುಂಬ, ಆರೋಗ್ಯ, ಪ್ರಾಣವನ್ನೂ ಲೆಕ್ಕಿಸದೇ ಕೆಲಸ ಮಾಡಬೇಕಾಗುತ್ತದೆ. ಅಂಥ ಸ್ಥೈರ್ಯವನ್ನು ಪ್ರತಿಯೊಬ್ಬ ಪೊಲೀಸ್ ಬೆಳೆಸಿಕೊಳ್ಳಬೇಕು’ ಎಂದು ರಾಜ್ಯ ಮೀಸಲು ಪೊಲೀಸ್ ಪಡೆಯ ಮಹಾನಿರೀಕ್ಷಕ ಎಸ್.ರವಿ ಕರೆ ನೀಡಿದರು.