ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಶಿಕ್ಷಣ ಸಚಿವರಾಗಿ ಹೊರಟ್ಟಿ ಅವರು ಮಾಡಿದ ಕ್ರಾಂತಿಯು ರಾಜ್ಯದ, ವಿಶೇಷವಾಗಿ ಉತ್ತರ ಕರ್ನಾಟಕದ ಶಿಕ್ಷಣ ಪ್ರೇಮಿಗಳು ನೆನಪಿಡುವಂಥದ್ದಾಗಿದೆ. ಈಗ ಸಭಾಪತಿ ಸ್ಥಾನದಂತಹ ಅತ್ಯುನ್ನತ ಮತ್ತು ಗೌರವಾನ್ವಿತ ಹುದ್ದೆಯಲ್ಲಿದ್ದಾರೆ. ಭವಿಷ್ಯದಲ್ಲೂ ಮಹತ್ವದ ಪಾತ್ರ ವಹಿಸುವ ಮೂಲಕ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅಮೂಲ್ಯ ಸೇವೆ ಮುಂದುವರಿಸಲಿದ್ದಾರೆ’.