ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಬಂದ ನಂತರ ತರಬೇತಿ ವಿಭಾಗದ ಜವಾಬ್ದಾರಿ ಕೇಳಿದರು. ಜನರಿಗೆ ಜ್ಞಾನ, ವಿಚಾರ ತಿಳಿಸುವಂಥದು. ನಾಯಕತ್ವ ಬೆಳೆಸುವಂಥದು. ಶಿಸ್ತು ಕಲಿಸುವಂಥದು. ಎಷ್ಡು ನಾಯಕರು ಈ ಕೆಲಸ ಮಾಡಿದ್ದಾರೆ! ಎಲ್ಲರೂ ಆ ಇನ್ಛಾರ್ಜ್ ಕೊಡಿ, ಈ ಇನ್ಛಾರ್ಜ್ ಕೊಡಿ ಎಂದು ಕೇಳಿದರು. ಆದರೆ ಸತೀಶ ತರಬೇತಿ ಕೊಡ್ತೀನಿ ಎಂದರು. ಅಂತಹ ಪ್ರಬಲ ನಾಯಕನಿಗೆ ಈ ಉಪ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿದ್ದೀವಿ. ಈ ಬಗ್ಗೆ ಎಲ್ಲಿಯೂ ಒಂದೇ ಒಂದು ಸಣ್ಣ ಅಪಸ್ವರ ಇಲ್ಲವಲ್ಲ? ಅದೇ ನಮ್ಮ ಶಕ್ತಿ ಎಂದರು.