‘ಅವರ ವಿಚಾರಗಳಿಗೆ ಹಲವು ದೇಶಗಳು ಮಾರು ಹೋಗಿವೆ. ಲಂಡನ್ನ ಥೀಮ್ಸ್ ನದಿ ತೀರದಲ್ಲಿ ಬಸವಣ್ಣನ ಪ್ರತಿಮೆ ಅನಾವರಣಗೊಳಿಸಲಾಗಿದೆ. ನಮ್ಮ ಸಂಸತ್ ಭವನದ ಎದುರು ಅಶ್ವಾರೂಢ ಪ್ರತಿಮೆಯು ಸಮಾನತೆಯ ಧ್ಯೋತಕವಾಗಿದೆ. ಕೇಂದ್ರ ಸರ್ಕಾರವು ಬಸವಣ್ಣನವರ ವಚನಗಳನ್ನು 22 ಭಾಷೆಗಳಲ್ಲಿ ಪ್ರಕಟಿಸಿದೆ. ಹೀಗೆ ಕಾಲಕಾಲಕ್ಕೆ ಅವರ ಜೀವನ ಸಂದೇಶಗಳನ್ನು ವಿಶ್ವದ ಜನತೆಗೆ ಮುಟ್ಟಿಸುವ ಕೆಲಸ ಒಂದೆಡೆಯಾದರೆ, ಅವರ ಪ್ರತಿಮೆಗಳ ಅನಾವರಣ ಇಂದಿನ ಯುವಪೀಳಿಗೆಗೆ ಸ್ಫೂರ್ತಿಯ ಸೆಲೆ ಆಗುವುದರಲ್ಲಿ ಯಾವ ಸಂದೇಹವೂ ಇಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.