ತೆಲಸಂಗ: ‘ಮನುಷ್ಯನು ಸ್ವಾರ್ಥಿ ಆಗುವುದು ಜೀವನವನ್ನು ಅಧಃಪತನಕ್ಕೆ ತಳ್ಳುವುದು ಮಾತ್ರವಲ್ಲದೆ, ಸುಖ–ಶಾಂತಿ–ನೆಮ್ಮದಿಯನ್ನೂ ಹಾಳು ಮಾಡುತ್ತದೆ’ ಎಂದು ಇಂಚಗೇರಿಯ ರೇವಣಸಿದ್ದೇಶ್ವರ ಮಹಾರಾಜ ಹೇಳಿದರು.
ಸಮೀಪದ ಕೊಟ್ಟಲಗಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದೇಶ ಮತ್ತು ಧರ್ಮ ರಕ್ಷಣೆ ಎಲ್ಲರ ಹೊಣೆಯಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡುವ ಕೆಲಸವನ್ನು ಪಾಲಕರು ಮಾಡಬೇಕು’ ಎಂದು ಸಲಹೆ ನೀಡಿದರು.
‘ಪಾಶ್ಚಾತ್ಯ ಸಂಸ್ಕೃತಿಯ ಬೆನ್ನು ಹತ್ತಿ ಮಕ್ಕಳನ್ನು ಬೆಳೆಸುತ್ತಿರುವುದರಿಂದ ಸಂಬಂಧಗಳು ಹಳಸಿ ಹೋಗಿ ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ’ ಎಂದು ವಿಷಾದಿಸಿದರು.
ಬೀಳಗಿಯ ಶಿವಾನಂದ ಸ್ವಾಮೀಜಿ, ಮುಖಂಡರಾದ ಅಡವೆಪ್ಪ ಅಥಣಿ, ಗುರು ಸತ್ತಿ, ಗುರು ಮುಗ್ಗನವರ, ಗುರು ಈಶ್ವರಪ್ಪಗೋಳ, ಸಿದ್ದಪ್ಪ ದೊಡ್ಡನಿಂಗಪ್ಪಗೋಳ, ಮಹಾದೇವ ಬಡವಗೋಳ, ವಿನೋಬಾ ದೊಡ್ಡನಿಂಗಪ್ಪಗೋಳ, ಸಿದ್ದು ಕೊಂಡಿ, ಶಿವಪ್ರಭೂ ಅಥಣಿ, ಬಾವುರಾಜ ಜಳಕಿ ಉಪಸ್ಥಿತರಿದ್ದರು.